ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫ್ರೆಂಡ್ಸ್ ಕ್ಲಬ್ ಮಿತ್ತೂರು ಮತ್ತು ಫ್ರೆಂಡ್ಸ್ ನವೋದಯ ಸ್ವಸಹಾಯ ಸಂಘದ ವತಿಯಿಂದ ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಗೊಂಡಿರುವ ಮಿತ್ತೂರು ಬೀಡಿನ ಮಜಲು ನಿವಾಸಿಯಾಗಿರುವ ಕಬಡ್ಡಿ ಆಟಗಾರ ಧನುಷ್ ಶೆಟ್ಟಿಯವರಿಗೆ ಅವರ ಮನೆಗೆ ತೆರಳಿ ಹತ್ತುಸಾವಿರ ರೂಪಾಯಿ ಸಹಾಯಧನ ನೀಡಲಾಯಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ಬ್ ನ ಅಧ್ಯಕ್ಷರಾದ ಎಂ. ಸುಧೀರ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಸಂತ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಈಶ್ವರಗೌಡ , ಸದಸ್ಯರಾದ ವಾಸುದೇವ ಕುಲಾಲ್, ಉಮೇಶ್ ಸುವರ್ಣ, ಸುರೇಶ್ ಎಂ, ಈಶ್ವರ ಅಮೀನ್, ಸುಧಾಕರ ಗೌಡ, ಗಂಗಾಧರ ಸುವರ್ಣ, ದಾಮೋದರ ಶೆಟ್ಟಿ, ಮೋಹನ್ ಸುವರ್ಣ, ಚಂದ್ರಹಾಸ ಬಿ, ಜಗದೀಶ್ ಹಾಗೂ ಧನುಶ್ ರವರ ಪೋಷಕರಾದ ಮೋಹನ್ ಶೆಟ್ಟಿ ಮತ್ತು ಲೀಲಾವತಿಯವರು ಉಪಸ್ಥಿತರಿದ್ದರು.