ಪುತ್ತೂರು: ಆರ್ಯಾಪು ಗ್ರಾಮದ ಗ್ರಾಮದೇವರಾದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ. 2ರಂದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಬೆಳಿಗ್ಗೆ 7.30, 8.30, 9.30, 10.30 ಮತ್ತು 12 ಗಂಟೆಗೆ ವಿಶೇಷವಾಗಿ ಹಾಲಿನ ಅಭಿಷೇಕ, ನಾಗತಂಬಿಲ, ನಾಗಪಂಚಾಮೃತಾಭಿಷೇಕ, ನಾಗಪೂಜೆ ನಡೆಯಿತು. ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಿಶೇಷವಾಗಿ ಸರ್ವಸೇವೆ, ಮಹಾಪೂಜೆ, ಕ್ಷೀರಾಭಿಷೇಕ ಸೇವೆಗಳು ನಡೆದು, ಮಧ್ಯಾ ಹ್ನ ಅನ್ನಸಂತರ್ಪಣೆ ನಡೆಯಿತು.