ಗ್ರಾಮೀಣ ಮಹೋತ್ಸವ ಮೂಲಕ ಆಯೋಜನೆ…; ದೀಪಾವಳಿ ಸಂಭ್ರಮಾಚರಣೆಗೆ ಭಾರತ್‌ನಿಂದ ಇನ್ನಷ್ಟೂ ಕೊಡುಗೆ

0

ಪುತ್ತೂರು : ಬೆಳಕಿನ ಹಬ್ಬ ದೀಪಾವಳಿಯ ಸಲುವಾಗಿ ಮಾರುತಿ ಸುಝಕಿಯು ತನ್ನೆಲ್ಲಾ ಮಾದರಿಯ ಕಾರಿನಲ್ಲೂ ಭರಪೂರ ಉಳಿತಾಯದ ಕೊಡುಗೆಗಳನ್ನು ಘೋಷಣೆ ಮಾಡಿ ಕಾರು ಪ್ರಿಯರಲ್ಲಿ ಮತ್ತಷ್ಟು ಆಸಕ್ತಿಯನ್ನು ಮೂಡಿಸಿದೆ. ದೀಪಗಳ ಹಬ್ಬವನ್ನು ವಿನೂತನ ಕಾರಿನೊಂದಿಗೆ ಸಂಭ್ರಮಿಸೋ ಅವಕಾಶ ಒದಗಿಸಿ ಕೊಟ್ಟಿದೆ. ಬರೋಬ್ಬರಿ 50 ಸಾವಿರಕ್ಕೂ ಮೀರಿದ ಬೃಹತ್ ಉಳಿತಾಯದ ಜೊತೆ ಫೈನಾನ್ಸ್ ಸೌಲಭ್ಯ ಹಾಗೂ ಕಾರು ವಿನಿಮಯಕ್ಕೂ ಅವಕಾಶ ತೆರೆದುಕೊಂಡಿದೆ. ಡೀಲರ್ ಸಂಸ್ಥೆ ಭಾರತ್ ಅಟೋ ಕಾರ್ಸ್ ಸಹಭಾಗಿತ್ವದಲ್ಲಿ ಪುತ್ತೂರು ಕಿಲ್ಲೆ ಮೈದಾನದಲ್ಲಿ 2 ದಿನದ ಬೃಹತ್ ಗ್ರಾಮೀಣ ಮಹೋತ್ಸವವನ್ನು ಅಯೋಜಿಸಿದ್ದು, ಕಾರು ಪ್ರಿಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಅ.19 ಮಹೋತ್ಸವ ಆರಂಭವಾಗಿ ಅ.20 ರಂದು ಸಂಜೆ ವೇಳೆ ಮಹೋತ್ಸವ ಕೊನೆಗೊಳ್ಳಲಿದೆ ಎಂದು ಟೀಂ ಲೀಡರ್ ಜಯರಾಜ್ ತಿಳಿಸಿದ್ದಾರೆ.

ವಿವಿಧ ಮಾದರಿ ಕಾರುಗಳಲ್ಲೂ ಅಚ್ಚರಿ ಉಳಿತಾಯವನ್ನು ಭಾರತ್ ಸಂಸ್ಥೆ ನೀಡಿದ್ದು , ಆ ಮೂಲಕ ರೂ. 50 ಸಾವಿರಕ್ಕೂ ಮಿಕ್ಕಿ ಉಳಿತಾಯವನ್ನು ಮಾಡಬಹುದು. ವಿವರಗಳಿಗಾಗಿ -9483501730 /9538925330

LEAVE A REPLY

Please enter your comment!
Please enter your name here