ಬೆಳಂದೂರು ಬೂತ್ 73ರಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ- ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

0

ಕಾಣಿಯೂರು: ಬೆಳಂದೂರು ಬೂತ್ 73ರಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಜಿ.ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನರವರ ಮನೆಯಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬೂತ್ ಸಮಿತಿ ಅಧ್ಯಕ್ಷೆ ಚಂಪಾ ಕುಶಾಲಪ್ಪ ಅಬೀರ, ಗ್ರಾ.ಪಂ. ಸದಸ್ಯ ಜಯಂತ ಅಬೀರ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಚಂದ್ರಯ್ಯ ಆಚಾರ್ಯ ಅಬೀರ, ಜನಾರ್ದನ ಆಚಾರ್ಯ ಕಾಣಿಯೂರು, ಬೂತ್ ಸಮಿತಿ ಕಾರ್ಯದರ್ಶಿ ಶೇಖರ ಅಬೀರ, ಸಂಜೀವ ಪೂಜಾರಿ ಅಬೀರ, ದಿನೇಶ್ ಅಬೀರ, ವೇದಾವತಿ ಅಬೀರ, ಶೃತಿ ಅಬೀರ ಉಪಸ್ಥಿತರಿದ್ದರು.

ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಅಣ್ಣು ಆಚಾರ್ಯ ಅಬೀರ ಅವರ ಮನೆಯಲ್ಲಿ ಜ 29ರಂದು ವೀಕ್ಷಿಸಲಾಯಿತು.

 

LEAVE A REPLY

Please enter your comment!
Please enter your name here