ಕಡಬ: ನಿರ್ವಾಹಕ ಇಲ್ಲದೆ ಸಂಚರಿಸಿದ ಬಸ್ಸು

0

  • 2 ಕಿ.ಮೀ ದೂರ ಕ್ರಮಿಸಿ ಬೈಕ್ ನಲ್ಲಿ ಹಿಂಬಾಲಿಸಿ ತನ್ನ ಬಸ್ ಏರಿಕೊಂಡ ನಿರ್ವಾಹಕ!

ಕಡಬ:ಬಸ್ ಚಾಲಕ ಮತ್ತು ನಿರ್ವಾಹನ ಮಧ್ಯೆ ಸಂವಹನ ಕೊರತೆ ಉಂಟಾದ ಹಿನ್ನೆಲೆಯಲ್ಲಿ ನಿರ್ವಾಹನನ್ನು ಬಿಟ್ಟು ಬಸ್ ಬಹುದೂರ ಸಾಗಿದ ಘಟನೆ ಕಡಬದಲ್ಲಿ ಫೆ.3ರಂದು ನಡೆದಿದೆ.

ಮಂಗಳೂರಿನಿಂದ ಸುಬ್ರಹಣ್ಯಕ್ಕೆ ಸಂಚರಿಸುವ ಸರ್ಕಾರಿ ಬಸ್ ಮುಂಜಾನೆ ಕಡಬ ಪೇಟೆಗೆ ತಲುಪಿತ್ತು. ಈ ಸಂದರ್ಭದಲ್ಲಿ ಬಸ್ ನಿಂದ ಇಳಿದ ಕಂಡಕ್ಟರ್ ಬಸ್ ನಿಲ್ದಾಣದಲ್ಲಿರುವ ಇಲಾಖೆಯ ಕಛೇರಿಗೆ ತೆರಳಿದರು.

ಬಸ್ ಹೊರಡುವ ಸಮಯವಾದಾಗ ನಿರ್ವಾಹಕ ಬಸ್ ಏರಿರಬಹುದೆಂದು ಭಾವಿಸಿ ಚಾಲಕ ಬಸ್ ಚಲಾಯಿಸಿದ್ದಾರೆ. ಕಡಬದಿಂದ ಸುಮಾರು 2 ಕಿ.ಮೀ ನಷ್ಟು ಮುಂದೆ ಬಂದಾಗ ಇದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಬಸ್ ನಲ್ಲಿ ನಿರ್ವಾಹಕರು ಇಲ್ಲದೇ ಇರುವುದನ್ನು ಗಮನಿಸಿ ಬಸ್ ಚಾಲಕನ ಗಮನಕ್ಕೆ ತಂದು ವಿದ್ಯಾರ್ಥಿಗಳು ಬಸ್ ನಿಲ್ಲಿಸಿದ್ದಾರೆ.

ಇಷ್ಟರಲ್ಲೇ ತಾನಿಲ್ಲದೇ ಬಸ್ ಮುಂದೆ ಹೋಗಿರುವುದು ನಿರ್ವಾಹಕನ ಗಮನಕ್ಕೂ ಬಂದಿತ್ತು . ಕೆಲ ಹೊತ್ತಿನ ಬಳಿಕ ಕಡಬದಿಂದ ವ್ಯಕ್ತಿಯೊಬ್ಬರ ಬೈಕ್ ಏರಿ ಎರಡು ಕಿ.ಮೀ ನಷ್ಟು ದೂರ ಕ್ರಮಿಸಿ ಬಸ್ ಸೇರಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here