ಅಬಕಾರಿ ನಿವೃತ್ತ ಇನ್‌ಸ್ಪೆಕ್ಟರ್ ನಾರ್ಣಪ್ಪ ನಾಯ್ಕ್ ನಿಧನ

0

ಪುತ್ತೂರು: ಅಬಕಾರಿ ನಿವೃತ್ತ ಇನ್‌ಸ್ಪೆಕ್ಟರ್ ಆಗಿದ್ದ ನಾರ್ಣಪ್ಪ ನಾಯ್ಕ(75ವ) ಅವರು ಫೆ. 19ರಂದು ರಾತ್ರಿ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.
ಅಬಕಾರಿ ನಿವೃತ್ತ ಇನ್‌ಸ್ಪೆಕ್ಟರ್ ನಾರ್ಣಪ್ಪ ನಾಯ್ಕ್ ಅವರು ಸವಣೂರು ಪುಣ್ಚಪ್ಪಾಡಿ ನಿವಾಸಿಯಾಗಿದ್ದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮಾಜಿ ಕೋಶಾಧಿಕಾರಿಯಾಗಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಪುತ್ತೂರು ಆಸ್ಪತ್ರ ಗೆ ದಾಖಲಾಗಿದ್ದರು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ರಾಧಾ, ಪುತ್ತೂರು ಸಾಯ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಇಂಜಿನಿಯರ್ ಆಗಿರುವ ಪುತ್ರ ಮಹೇಶ್ ಮತ್ತು ಪುತ್ತೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಪುತ್ರಿ ಕವಿತಾ ಅವರನ್ನು ಅಗಲಿದ್ದಾರೆ.

ಫೆ. 20ಕ್ಕೆ ಅಂತ್ಯಕ್ರಿಯೆ:
ನಾರ್ಣಪ್ಪ ನಾಯ್ಕ್ ಅವರ ಅಂತ್ಯ ಸಂಸ್ಕಾರವನ್ನು ಪುಣ್ಚಪ್ಪಾಡಿಯಲ್ಲಿ ಫೆ. 20ರಂದು ಮಧ್ಯಾಹ್ನ ನೆರವೇರಿಸಲಾಗುವುದು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here