ದರ್ಬೆಯಲ್ಲಿ ಹಲ್ಲೆ, ಕೊಲೆ ಬೆದರಿಕೆ – ವಾರಂಟ್ ಆರೋಪಿಯನ್ನು ಬಂಧಿಸಿದ ಪುತ್ತೂರು ಪೊಲೀಸರು

0

ಪುತ್ತೂರು: ದರ್ಬೆಯಲ್ಲಿ ಹಲ್ಲೆ ಮತ್ತು ಕೊಲೆ ಬೆದರಿಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ 8 ತಿಂಗಳಿನಿಂದ ಹಾಜರಾಗದೆ ತಲೆಮರೆಸಿಕೊಂಡ ಮಾಡನ್ನೂರು ಗ್ರಾಮದ ಆರೋಪಿಯೊಬ್ಬರನ್ನು ಪುತ್ತೂರು ಪೊಲೀಸರು ಫೆ.19 ರಂದು ಆರೋಪಿ ಪ್ರಸ್ತುತ ವಾಸ್ತವ್ಯ ಇರುವ ಸವಣೂರು ಅಪ್ರಾಝ ಫೇರಾ ಡೈಸ್ ಫ್ಲಾಟ್ ನಿಂದ ಬಂಧಿಸಿದ್ದಾರೆ.

ಮಾಡನ್ನೂರು ಗ್ರಾಮದ ಕೊಂಬಲಿ ನಿವಾಸಿ ಸುಲೈಮಾನ್ ಬಂಧಿತ ಆರೋಪಿ. ಆರೋಪಿ ಸುಲೈಮಾನ್ ಎಂಬವರು 2021 ರಲ್ಲಿ ದರ್ಬೆಯಲ್ಲಿ ಹೊಟೇಲ್ ವೊಂದಕ್ಕೆ ಅಕ್ರಮವಾಗಿ ನುಗ್ಗಿ ವ್ಯಕ್ತಿಯೊಬ್ವರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿರುವ ವಿಚಾರಸಲ್ಲಿ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಲ್ಲಿ ಆರೋಪಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಪುತ್ತೂರು ಪೊಲೀಸರು ಆರೋಪಿಯನ್ನು ಸವಣೂರು ಅಪ್ರಾಝ ಫೇರಾ ಡೈಸ್ ಫ್ಲಾಟ್ ನಿಂದ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here