ಮುಂದುವರಿದ ಆನೆ ಪತ್ತೆ ಕಾರ್ಯಾಚರಣೆ
ಐತ್ತೂರು ಭಾಗದಲ್ಲಿ ಕಾಡಾನೆಗಾಗಿ ಹುಡುಕಾಟ

0

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪ ಇಬ್ಬರನ್ನು ಬಲಿ ಪಡೆದುಕೊಂಡಿರುವ ಕಾಡಾನೆ ಸೆರೆ ಕಾರ್ಯಚರಣೆ 2ನೇ ದಿನವಾದ ಫೆ.22ರಂದು ನಡೆಯಿತು.

ಐತ್ತೂರು ಗ್ರಾಮದ ಆಜನ ಪ್ರದೇಶದಲ್ಲಿ ಕಾಡಾನೆ ಕಾಣಿಸಿಕೊಂಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಕಾರ್ಯಾಚರಣೆ ಮಾಡಲಾಯಿತು. ದುಬಾರೆ ಹಾಗೂ ತಿತಿಮತಿ ಆನೆ ಶಿಬಿರದಿಂದ ಕರೆತರಲಾಗಿದ್ದ 5 ಸಾಕಾನೆಗಳನ್ನು ಪತ್ತೆ ಕಾರ್ಯಾಚರಣೆ ಗೆ ಬಳಸಿಕೊಳ್ಳಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಮಾರ್ಗದರ್ಶನ ನೀಡಿತು. ಆಜನ ಎಂಬಲ್ಲಿಂದ ಸುಮಾರು 1ಕಿ.ಮೀ.ಗೂ ಹೆಚ್ಚು ದೂರ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಲಾಗಿದೆ. ಆದರೆ ಯಾವುದೇ ಕುರುಹು ದೊರೆತಿಲ್ಲ ಎಂದು ವರದಿಯಾಗಿದೆ.

ಡಿಎಫ್ ಒ ದಿನೇಶ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳದಲ್ಲೇ ಇದ್ದು ಸೂಕ್ತ ಮಾರ್ಗದರ್ಶನ ನೀಡುತ್ತಿದೆ.

LEAVE A REPLY

Please enter your comment!
Please enter your name here