ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ರಂಶೀದ್ ಸಖಾಫಿ, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಸಖಾಫಿ, ಕೋಶಾಧಿಕಾರಿಯಾಗಿ ರಫೀಕ್ ಪರಾಡ್ ಆಯ್ಕೆ

0

ಪುತ್ತೂರು: ಎಸ್‌ಎಸ್‌ಎಫ್ ಕುಂಬ್ರ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಕಟ್ಟತ್ತಾರು ಅವರ ಅಧ್ಯಕ್ಷತೆಯಲ್ಲಿ ಕುಂಬ್ರ ಎಸ್‌ವೈಎಸ್ ನೂತನ ಕಛೇರಿಯಲ್ಲಿ ನಡೆಯಿತು.

ಅಬ್ದುಲ್ ರಹ್ಮಾನ್ ಸಖಾಫಿ ನೇರೊಳ್ತಡ್ಕ ದುವಾ ಮಾಡಿದರು. ಹಾಫಿಳ್ ರಂಶೀದ್ ಸಖಾಫಿ ಸಭೆ ಉದ್ಘಾಟಿಸಿದರು. ಕುಂಬ್ರ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಗಟ್ಟಮನೆ 2022-23ನೇ ಸಾಲಿನ ವರದಿ ಹಾಗೂ ಲೆಕ್ಕ ಪತ್ರ ವಾಚಿಸಿದರು. ಸಯ್ಯಿದ್ ಸಾಬಿತ್ ತಂಙಳ್ ಸಖಾಫಿ ಪಾಟ್ರಕೋಡಿ, ದ.ಕ. ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಸಾಂಘಿಕ ತರಬೇತಿ ನಡೆಸಿದರು. ಬಳಿಕ 2023-24 ನೇ ವರ್ಷಕ್ಕೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹಾಫಿಳ್ ರಂಶೀದ್ ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಸಖಾಫಿ ನೇರೊಳ್ತಡ್ಕ, ಕೋಶಾಧಿಕಾರಿಯಾಗಿ ರಫೀಕ್ ಪರಾಡ್ ಅವರನ್ನು ಆಯ್ಕೆ ಮಾಡಲಾಯಿತು. ಕ್ಯಾಂಪಸ್ ಕಾರ್ಯದರ್ಶಿಯಾಗಿ ಬಾಸಿತ್ ದರ್ಬೆ, ದಅವಾ ಕಾರ್ಯದರ್ಶಿಯಾಗಿ ರವೂಫ್ ಹಾಶಿಮಿ, ವಿಸ್ಡಂ ಕಾರ್ಯದರ್ಶಿಯಾಗಿ ಆಸಿಫ್ ಮೈದಾನಿಮೂಲೆ, ಕ್ವಾಲಿಟಿ ಡೆವಲಪ್ಮೆಂಟ್ ಕಾರ್ಯದರ್ಶಿಯಾಗಿ ಸಿರಾಜ್ ತಿಂಗಳಾಡಿ, ಕಲ್ಚರಲ್ ಕಾರ್ಯದರ್ಶಿಯಾಗಿ ಅಶ್ರಫ್ ಸಖಾಫಿ, ರೈನ್ಬೊ ಕಾರ್ಯದರ್ಶಿಯಾಗಿ ಮುಸ್ತಫಾ ಗಟ್ಟಮನೆ, ರೀಡ್ ಪ್ಲಸ್ ಕಾರ್ಯದರ್ಶಿಯಾಗಿ ಸಾದಿಕ್ ಗಟ್ಟಮನೆ, ಮೀಡಿಯಾ ಕಾರ್ಯದರ್ಶಿಯಾಗಿ ನೌಫಲ್ ಹಿಮಮಿ ಸಖಾಫಿಯವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇರ್ಷಾದ್ ಗಟ್ಟಮನೆ, ಸಿದ್ದೀಕ್ ಕಲ್ಪನೆ, ಇಲ್ಯಾಸ್ ಮೈದಾನಿಮೂಲೆ, ಅನಸ್ ನೇರೊಳ್ತಡ್ಕ, ಶರಫ್ ಗಟ್ಟಮನೆರವರನ್ನು ಆಯ್ಕೆ ಮಾಡಲಾಯಿತು. ಡಿವಿಝನ್ ನಿಂದ ವೀಕ್ಷಕರಾಗಿ ರಫೀಕ್ ಬಾಹಸನಿ, ಕರೀಂ ಬಾಹಸನಿ ಭಾಗವಹಿಸಿದ್ದರು.

ಪ್ರ.ಕಾರ್ಯದರ್ಶಿ ಇರ್ಷಾದ್ ಗಟ್ಟಮನೆ ಸ್ವಾಗತಿಸಿದರು. ನೂತನ ಪ್ರ.ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸಖಾಫಿ ನೇರೊಳ್ತಡ್ಕ ವಂದಿಸಿದರು.

LEAVE A REPLY

Please enter your comment!
Please enter your name here