ಶ್ರೀ ಅಯ್ಯಪ್ಪ ಭಜನಾ ಮಂದಿರ ಪೆರಿಗೇರಿ ಪುನಃ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಡಗನ್ನೂರು:ಶ್ರೀ ಅಯ್ಯಪ್ಪ ಭಜನಾ ಮಂದಿರ ಪೆರಿಗೇರಿ ಪುನಃ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಮಂತ್ರಣ ಪತ್ರಿಕೆಯನ್ನು ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಾಸ್ಥಾನ ಪಡುಮಲೆಯಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷ ಶ್ರೀನಿವಾಸ ಗೌಡ ಕನ್ನಯ, ಉಪಾಧ್ಯಕ್ಷ ರಾಜ್ ಕುಮಾರ್ ಆಚಾರ್ಯ ಪೆರಿಗೇರಿ. ಮಂದಿರದ ಗುರುಸ್ವಾಮಿ ಮೋಹನ್ , ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ, ಉಪಾಧ್ಯಕ್ಷರು ನವೀನ್ ಗೌಡ ಸಂಪಿಗೆಮಜಲು, ಸಂಘಟನಾ ಕಾರ್ಯದರ್ಶಿ ರಾಹುಲ್ ಗೌಡ ಕೋಡಿಯಡ್ಕ, ನವಚೈತನ್ಯ ಯುವಕ ಮಂಡಲದ ಕಾರ್ಯದರ್ಶಿ ಯಶ್ವಿತ್ ಗೌಡ ಕನ್ನಯ, ಅಯ್ಯಪ್ಪ ಮಹಿಳಾ ಭಜನ ಮಂಡಳಿಯ ಗೌರವಾಧ್ಯಕ್ಷರು ಸಾವಿತ್ರಿ ಜೆ ಪ್ರಭು, ಅಧ್ಯಕ್ಷರು ಶೈಲಾ ಡಿ, ಉಪಾಧ್ಯಕ್ಷರು ಜಯಶೀಲ ಮತ್ತು ಶಿವಪ್ರಸಾದ್ ಭಟ್ ಪಟ್ಟೆ , ವಿಶ್ವನಾಥ ಗೌಡ ಕನ್ನಯ,ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಸಂತ ಗೌಡ ಕನ್ನಾಯ,ಹೊನ್ನಪ್ಪ ಗೌಡ ಆಲಂತಡ್ಕ ಗಣೇಶ ಆಚಾರ್ಯ ಮುಂಡಾಜೆ, ಪವನ್ ಕನ್ನಯ, ಅರವಿಂದ ಕನ್ನಯ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here