ಎ.ಎಸ್.ಐಗೆ ಹಲ್ಲೆ ಪ್ರಕರಣ ವಾರಂಟ್ ಆರೋಪಿ ಬಂಧನ

0

ಪುತ್ತೂರು:ವರ್ಷದ ಹಿಂದೆ ಎ.ಎಸ್.ಐಗೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯಾಗಿರುವ ತೆಂಕಿಲ ನಿವಾಸಿ ಪವನ್ ಎಂಬವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.


ತೆಂಕಿಲ ಜಿನ್ನಪ್ಪ ಪೂಜಾರಿ ಅವರ ಪುತ್ರ ಪವನ್ ವಿರುದ್ಧ, ೨೦೨೨ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿದ್ದ ಎ.ಎಸ್.ಐ ಒಬ್ಬರಿಗೆ ಹಲ್ಲೆ ನಡೆಸಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ಎರಡನೇ ಆರೋಪಿಯಾಗಿರುವ ಪವನ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.ನ್ಯಾಯಾಲಯ ಆರೋಪಿ ವಿರುದ್ದ ವಾರಂಟ್ ಜಾರಿ ಮಾಡಿತ್ತು.ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು ಮಾ.೬ರಂದು ರಾತ್ರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here