![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ವಿದ್ಯಾರ್ಥಿಗಳಲ್ಲಿ ವೈಜ್ಣಾನಿಕ ಮನೋಧರ್ಮ ಜಾಗೃತಗೊಳ್ಳಬೇಕೆಂಬ ನಿಟ್ಟಿನಲ್ಲಿ, ದ ಹಿಂದೂ ಹಾಗೂ KIOCL ಇವರ ಜಂಟಿ ಆಶ್ರಯದಲ್ಲಿ ‘ಮೇಕ್ ಇನ್ ಇಂಡಿಯಾ’ ಎಂಬ ವಿಷಯದ ಮೇಲೆ ಅಂತರ್ ಶಾಲಾ ವಿಜ್ಞಾನ ಮೇಳವನ್ನು ಮಂಗಳೂರಿನ ನೆಹರು ಭವನ,KIOCL, ಟೌನ್ ಶಿಪ್ ಕಾವೂರಿನಲ್ಲಿ ಮಾರ್ಚ್ 4ರಂದು ಆಯೋಜಿಸಲಾದ ಸ್ಪರ್ಧೆಯಲ್ಲಿ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳಾದ 7ನೇ ತರಗತಿಯ ಧನ್ಯಶ್ರೀ ಎಚ್.ಪಿ (ಪ್ರಕಾಶ್ ಎಚ್. ಕೆ , ಮಾಲಿನಿ ಕೆ. ಎನ್ ಅವರ ಪುತ್ರಿ) ಹಾಗೂ ನಿಕ್ಷೇಪ ಆರ್. ರೈ ( ಕೆ. ರಮೇಶ್ ರೈ , ಶ್ರೀಲತಾ ಆರ್. ರೈ ಅವರ ಪುತ್ರಿ) ಅವರು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.
![](https://puttur.suddinews.com/wp-content/uploads/2023/03/78ec55e7-59b6-41eb-899e-e088560b0556.jpg)
ಮಾತ್ರವಲ್ಲದೆ, ಎಂಟನೇ ತರಗತಿಯ ಪಿ. ಶಶಾಂಕ್ ಭಟ್ (ಪಿ. ಗೋವಿಂದರಾಜ್ , ಪ್ರತಿಮಾ ಪಿ ಯವರ ಪುತ್ರ) ಹಾಗೂ ಸಂಚಯ್ ಎಸ್. ಗೌಡ (ಶಿವಾನಂದ ಗೌಡ, ಚೇತನ ಅವರ ಪುತ್ರ) ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸಿಂಧೂ. ವಿ. ಜಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![](https://puttur.suddinews.com/wp-content/uploads/2023/03/8def5ef6-06ba-4e8d-8699-44ffaf2e1d47.jpg)