ವಿಟ್ಲ: ಮಹಾದೇವ ಟ್ರೇಡರ್ಸ್‌ ಶುಭಾರಂಭ

0

ವಿಟ್ಲ: ಇಲ್ಲಿನ ಖಾಸಗಿ ಬಸ್‌ ನಿಲ್ದಾಣದ ಎದುರುಗಡೆ ಹನುಮಾನ್‌ ಪ್ರಿಂಟರ್ಸ್‌ ಬಿಲ್ಡಿಂಗ್‌ನಲ್ಲಿ ಟೈಲರಿಂಗ್‌ ಮೆಷಿನ್‌ ಸೇಲ್ಸ್‌ & ಸರ್ವಿಸ್‌ ಸೆಂಟರ್‌ ಮಹಾದೇವ ಟ್ರೇಡರ್ಸ್‌ ಮಾ.6ರಂದು ಶುಭಾರಂಭಗೊಂಡಿತು.

ವಿಟ್ಲ ನಾರಾಯಣ ನಾವಡ ಮತ್ತು ರಾಘವೇಂದ್ರ ರಾವ್‌ ಬಾಕ್ರಬೈಲು ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಹನುಮಾನ್‌ ಪ್ರಿಂಟರ್ಸ್‌ ಬಿಲ್ಡಿಂಗ್‌ ಮಾಲಕ ಕೆ. ವೆಂಕಟೇಶ್‌ ಭಟ್‌, ಗಿರಿಯಪ್ಪ ಗೌಡ ಬಸವನಗುಡಿ, ಶ್ರೀಧರ್‌ ಕೆ ಚಂದಳಿಕೆ, ಹೇಮಾ ಶ್ರೀಧರ್‌ ಚಂದಳಿಕೆ, ಉಷಾ ಕಂಪೆನಿಯ ಪ್ರಶಾಂತ್‌ ಮಂಗಳೂರು, ಗಣೇಶ್‌ ಕೆ, ರೂಪಾಶ್ರೀ, ಸವಿತಾ ಕೆ, ಮತ್ತಿತರ ಗಣ್ಯರು ಆಗಮಿಸಿ ಶುಭ ಹಾರೈಸಿದರು.

ಇಲ್ಲಿ ಹಳೆಯ ಟೈಲರಿಂಗ್‌ ಮೆಷಿನ್‌ ಖರೀದಿ, ಮಾರಾಟ ಹಾಗೂ ಎಲ್ಲ ರೀತಿಯ ಟೈಲರಿಂಗ್‌ ಮೆಷಿನ್‌ಗಳನ್ನು ರಿಪೇರಿ ಮಾಡಿ ಕೊಡಲಾಗುವುದು ಎಂದು ಮಾಲಕ ಚೇತನ್‌ ಗೌಡ ಹೊಸಮನೆ ಪಿಲಿಂಜ ಅತಿಥಿಗಳನ್ನು ಸ್ವಾಗತಿಸುತ್ತಾ ತಿಳಿಸಿದರು.

ನಾರಾಯಣ ಗೌಡ ವಂದಿಸಿದರು. ಸುಚಿತ್ರಾ, ಅಶ್ವಿನ್‌ ಗೌಡ, ಜತ್ತಪ್ಪ ಗೌಡ ಪಿಲಿಂಜ ಹೊಸಮನೆ ಸಹಕರಿಸಿದರು.

LEAVE A REPLY

Please enter your comment!
Please enter your name here