![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಜೇಸಿಐ ಪುತ್ತೂರು, ನಗರಸಭೆ ವಾರ್ಡ್ ನಂಬರ್ 21 ಮುಕ್ರಂಪಾಡಿ ಮತ್ತು ಶಿವಳ್ಳಿ ಮಹಿಳಾ ಸಂಪದ ದರ್ಬೆ ಇದರ ವತಿಯಿಂದ ವಿಶ್ವಮಹಿಳಾ ದಿನಾಚರಣೆ ಮಾ. 8ರಂದು ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು.
![](https://puttur.suddinews.com/wp-content/uploads/2023/03/7ab8f6db-b6b9-4aea-b4f0-6d3af926c9e7.jpg)
ಮಹಿಳಾ ಸಂಯೋಜಕಿ ವಸಂತಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಶಶಿಧರ್ಬಿ .ಎನ್.ಅವರು ಮಹಿಳಾ ಭೂಮಿ ಕಾನೂನು ಬಗ್ಗೆ ವಿಷಯ ಮಂಡನೆ ಮಾಡಿದರು. ಮುಖ್ಯ ಅತಿಥಿಗಳಾಗಿದ್ದ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ನಗರಸಭಾ ಸದಸ್ಯೆ ಇಂದಿರಾ ಪಿ. ಆಚಾರ್ಯ ಹಾಗೂ ವೀಣಾ ತಂತ್ರಿ ಶುಭ ಹಾರೈಸಿದರು. ಮಹಿಳಾ ಸಾಧಕಿ ಶೋಭಾ ರೈಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಸಿ ಗೌರವಿಸಲಾಯಿತು. ಸಭೆಯ ನಂತರ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.