‘ಭೋ… ಶಂಭೋ…’ ಭಕ್ತಿ ಗೀತೆ ಬಿಡುಗಡೆ

0

ಉಪ್ಪಿನಂಗಡಿ: ಉದಯೋನ್ಮುಖ ಯುವ ಗಾಯಕ ನಿತೇಶ್ ಅನಂತಾಡಿಯವರು ಹಾಡಿರುವ ‘ಭೋ… ಶಂಭೋ…’ ಭಕ್ತಿ ಗೀತೆಯನ್ನು ಉಪ್ಪಿನಂಗಡಿಯಲ್ಲಿ ನಡೆದ ವಿಜಯ- ವಿಕ್ರಮ ಜೋಡುಕರೆ ಕಂಬಳ ಕೂಟದಲ್ಲಿ ಬಿಡುಗಡೆಗೊಳಿಸಲಾಯಿತು. ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ನಂದಾವರ ಉಮೇಶ್ ಶೆಣೈ ಭಕ್ತಿಗೀತೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಾರ್ಯಾಧ್ಯಕ್ಷ ಅಶೋಕ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಗೌರವ ಸಲಹೆಗಾರರಾದ ನಿರಂಜನ ರೈ ಮಠಂತಬೆಟ್ಟು, ಸಹ ಸಂಚಾಲಕಾರದ ಜಯಪ್ರಕಾಶ್ ಬದಿನಾರು, ರಾಜೇಶ್ ರೈ ಉಪ್ಪಿನಂಗಡಿ, ಶಿವರಾಮ ಶೆಟ್ಟಿ ಗೋಳ್ತಮಜಲು, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಉಪಾಧ್ಯಕ್ಷರಾದ ವಿದ್ಯಾಧರ ಜೈನ್ ಉಪ್ಪಿನಂಗಡಿ, ಶಿವಪ್ರಸಾದ್ ರೈ ಮಠಂತಬೆಟ್ಟು, ರಾಮಚಂದ್ರ ಮಣಿಯಾಣಿ, ಸದಸ್ಯರುಗಳಾದ ದಾಮೋದರ ಶೆಟ್ಟಿ ಮಠಂತಬೆಟ್ಟು, ಬಾಲಕೃಷ್ಣ ಶೆಟ್ಟಿ ಮಠಂತಬೆಟ್ಟು, ಆಲ್ಬಮ್ ತಂಡದ ಪೂರ್ಣೇಶ್ ಮಿತ್ತೂರು, ಸೂರ್ಯ, ಸಂಕೇತ್ ಕುಲಾಲ್ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.

ನಿತೇಶ್ ಅನಂತಾಡಿಯವರು ಜಿಲ್ಲೆಯ ವಿವಿಧ ಟಿವಿ ಚಾನೆಲ್‌ಗಳ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಮೆಚ್ಚುಗೆಯನ್ನು ಪಡೆದವರು. ಈ ಭಕ್ತಿಗೀತೆಯು ಕೋಡಿಂಬಾಡಿ ಸಂಪಿಗೆದಡಿ-ಮಠಂತಬೆಟ್ಟು ಯೋಗೀಶ್ ಯಸ್. ಸಾಮಾನಿಯವರ ಸಂಪೂರ್ಣ ಸಹಕಾರದೊಂದಿಗೆ ಮೂಡಿ ಬಂದಿದ್ದು, ಸುವಾನಿ ಕ್ರಿಯೇಶನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಇದನ್ನು ವೀಕ್ಷಿಸಬಹುದು.

LEAVE A REPLY

Please enter your comment!
Please enter your name here