ಮಾ.23:ನೆಹರುನಗರದಲ್ಲಿ ನಕ್ಷ ಕನ್ಸ್ಟ್ರಕ್ಷನ್ ಶುಭಾರಂಭ

0

ಪುತ್ತೂರು: ನೆಹರುನಗರದಲ್ಲಿನ ಎಡಕ್ಕಾನ ಟ್ರೇಡರ‍್ಸ್/ಕಪಿಲಾ ಗ್ರಾನೈಟ್ ಬಿಲ್ಡಿಂಗ್ ಬಳಿಯ ಉಪಾಧ್ಯಾಯ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ನಕ್ಷ ಕನ್‌ಸ್ಟ್ರಕ್ಷನ್ ಸಂಸ್ಥೆಯು ಮಾ.23 ರಂದು ಶುಭಾರಂಭಗೊಳ್ಳಲಿದೆ.

ಶಾಸಕರಾದ ಸಂಜೀವ ಮಠಂದೂರುರವರು ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಮುಳಿಯ ಕೇಶವ ನಿಲಯದ ಶ್ರೀಮತಿ ಕಾವೇರಿ ಅಮ್ಮ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಪುತ್ತೂರು ಸೃಷ್ಠಿ ಕನ್‌ಸ್ಟ್ರಕ್ಷನ್‌ನ ಶಿವಪ್ರಸಾದ್ ಟಿ, ಮಾಸ್ಟರ್ ಪ್ಲಾನರಿ ಮಾಲಕ ಹಾಗೂ ಪೇಸ್ ಗೌರವಾಧ್ಯಕ್ಷ ಆನಂದ್ ಕುಮಾರ್ ಎಸ್.ಕೆ, ಪೇಸ್ ಅಧ್ಯಕ್ಷ ಅಕ್ಷಯ್ ಎಸ್.ಕೆರವರು ಭಾಗವಹಿಸಲಿದ್ದಾರೆ ಎಂದು ನೂತನ ಸಂಸ್ಥೆಯ ಮುಖ್ಯಸ್ಥರಾದ ಹೃಷಿಕೇಶ್ ಕೆ.ಎಸ್ ಹಾಗೂ ಪ್ರತೀಕ್ ಪಿ.ಜಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here