ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ತಿಂಗಳ ಸರಣಿ ತಾಳಮದ್ದಳೆ ” ಸುದರ್ಶನ ವಿಜಯ” ಮಾ.20ರಂದು ಸಂಜೆ ನಡೆಯಿತು.

ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ, ಚಂದ್ರಶೇಖರ್ ಹೆಗ್ಡೆ ನೆಲ್ಯಾಡಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ ಮತ್ತು ದುಗ್ಗಪ್ಪ ಯನ್ ( ವಿಷ್ಣು ), ಸಂಜೀವ ಪಾರೆಂಕಿ ( ಲಕ್ಷ್ಮೀ ), ಗುಂಡ್ಯಡ್ಕ ಈಶ್ವರ ಭಟ್ ( ಶತ್ರುಪ್ರಸೂದನ ), ದಿವಾಕರ ಆಚಾರ್ಯ ಗೇರುಕಟ್ಟೆ ( ಸುದರ್ಶನ ), ಚಂದ್ರಶೇಖರ್ ಭಟ್ ಬಡೆಕ್ಕಿಲ( ದೇವೇಂದ್ರ ) ಸಹಕರಿಸಿದರು. ಟಿ ರಂಗನಾಥ ರಾವ್ ಸ್ವಾಗತಿಸಿ, ರಾಜಗೋಪಾಲ್ ಭಟ್ ಬನ್ನೂರು ವಂದಿಸಿದರು .ಮಂದಿರ ಅಧ್ಯಕ್ಷ ವಿಶ್ವನಾಥ ಗೌಡ. ಮೋಹನ್ ಜೈನ್ , ಚಂದ್ರಶೇಖರ್ ಮೊದಲಾದವರು ಸಹಕರಿಸಿದರು.

ಶೇಖರ್ ಬಿರ್ವ ಬನ್ನೂರು ಕಾರ್ಯಕ್ರಮವನ್ನು ಪ್ರಾಯೋಜಿಸಿದರು.

LEAVE A REPLY

Please enter your comment!
Please enter your name here