ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

0

ಪುತ್ತೂರು: ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ಸೈಮನ್ ಮತ್ತು ಡಿವೈಎಸ್ಪಿ ಚೆಲುವರಾಜ್ ಅವರು ಮಾ.27ರಂದು ಪುತ್ತೂರು ತಾಲೂಕು ಕಚೇರಿಯ ತಹಸೀಲ್ದಾರ್ ಸಭಾಂಗಣದಲ್ಲಿ ಅಹವಾಲು ಸ್ವೀಕರಿಸಿದರು.

ಕಡತಗಳ ವಿಲೇವಾರಿಯಲ್ಲಿ ತಡವಾದ ಕುರಿತ ಮತ್ತು ಭೂದಾಖಲೆ ವಿಭಾಗದಲ್ಲಿನ ನ್ಯೂನ್ಯತೆಗಳ ಕುರಿತು ಸಾರ್ವಜನಿಕರಿಂದ ಬಂದ ದೂರು ಅರ್ಜಿಗೆ ಸಂಬಂಧಿಸಿ ಸಂಬಂಧಿಸಿದ ಅಧಿಕಾರಿಗಳಲ್ಲಿ ವಿಚಾರಣೆ ಮಾಡಿದರು. ಸುಮಾರು 8 ದೂರು ಅರ್ಜಿಗಳು ಬಂದಿದ್ದು, ಅದನ್ನು ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಶಂಕರ್, ಉಪತಹಸೀಲ್ದಾರ್ ಸುಲೋಚನಾ, ಗ್ರೇಡ್ 2 ತಹಸೀಲ್ದಾರ್ ಲೋಕೇಶ್, ಕಂದಾಯಾಧಿಕಾರಿ ದಯಾನಂದ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here