ಕಡಬ; ಏಕಾಹ ಭಜನೆಯಲ್ಲಿ ಉದನೆಯ ಚಂದ್ರಶೇಖರ್ ರವರ ಚಿಕಿತ್ಸೆಗೆ ಧನ ಸಂಗ್ರಹ-ಹಸ್ತಾಂತರ

0

ಕಡಬ: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ದ. ಕ ಮತ್ತು ಯುವವಾಹಿನಿ ಕಡಬ ಘಟಕದ ಸಹಕಾರದಲ್ಲಿ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಏಕಾಹ ಭಜನೆಯ ಸಂದರ್ಭದಲ್ಲಿ ಉದನೆ ಬನಾರಿ ನಿವಾಸಿ ಚಂದ್ರಶೇಖರ್ ಇವರ ಚಿಕಿತ್ಸೆಯ ಸಲುವಾಗಿ ನಿಧಿ ಸಂಗ್ರಹ ಅಭಿಯಾನ ನಡೆಸಲಾಗಿದ್ದು. ಈ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ಚೆಕ್ ಮೂಲಕ ಏ.3 ರಂದು ಹಸ್ತಾಂತರಿಸಲಾಯಿತು.

ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಕಡಬ ಆರಕ್ಷಕ ಠಾಣಾ ಉಪನಿರೀಕ್ಷ ಹರೀಶ್ ಅವರು ಚಂದ್ರಶೇಖರ್ ಅವರ ಮನೆಯವರಿಗೆ ಹಸ್ತಾಂತರಿಸಿದರು.

ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಮತ್ತು ಏಕಾಹ ಭಜನೆಯ ಅಧ್ಯಕ್ಷ ಅಜಿತ್ ರೈ ಅರ್ತಿಲ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಯ ಗೌರವಾಧ್ಯಕ್ಷ ಉದಯ್ ಭಟ್, ಅಧ್ಯಕ್ಷ ಡಿ. ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು, ಯುವವಾಹಿನಿ ಅಧ್ಯಕ್ಷ ಕೃಷ್ಣಪ್ಪ ಅಮೈ, ಯುವವಾಹಿನಿಯ ಕೇಂದ್ರ ಸಮಿತಿ ನಿರ್ದೇಶಕರಾದ ಶಿವಪ್ರಸಾದ್ ನೂಚಿಲ, ನವೀನ್ ಕೊಂಬಾರು, ಠಾಣಾ ಸಿಬ್ಬಂದಿ ಭವಿತ್ ರೈ, ಏಕಾಹ ಭಜನಾ ಸಮಿತಿಯ ಕೋಶಾಧಿಕಾರಿ ಸೀತಾರಾಮ ಎ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here