ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿಯ ನರಿಮೊಗರು ವಲಯ

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಪುತ್ತೂರು ಇದರ ನರಿಮೊಗರು ವಲಯದ ಮಹಾಸಭೆ ಮತ್ತು ಪದಾಧಿಕಾರಿಗಳ ಆಯ್ಕೆ ಎ.4ರಂದು ವಲಯ ಸಮಿತಿ ಅಧ್ಯಕ್ಷ ಆನಂದ ಪೂಜಾರಿ ದಂಡ್ಯನಕುಕ್ಕುರವರ ಅಧ್ಯಕ್ಷತೆಯಲ್ಲಿ ನರಿಮೊಗರು ಸಹಕಾರಿ ಸಭಾಭವನದಲ್ಲಿ ಜರಗಿತು.

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ದ.ಕ ಜಿಲ್ಲಾ ಅಧ್ಯಕ್ಷ ಜಯಂತ್ ಉರ್ಲಾಂಡಿ, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ್ ಬಿ.ಯನ್., ಪ್ರಧಾನ ಕಾರ್ಯದರ್ಶಿ ಉಮಾ ನಾಕ್ ಉಪಸ್ಥಿತಿಯಲ್ಲಿ ನರಿಮೊಗರು ವಲಯ ಸಮಿತಿಯನ್ನು ಪುನರಚಿಸಲಾಯಿತು.

ಅಧ್ಯಕ್ಷರಾಗಿ ಆನಂದ ಪೂಜಾರಿ ದಂಡ್ಯನಕುಕ್ಕು, ಉಪಾಧ್ಯಕ್ಷರಾಗಿ ಭಾರತಿ ಜಯಾನಂದ, ಕಾರ್ಯದರ್ಶಿಯಾಗಿ ವಸಂತ ಗೌಡ ಪುರುಷರಕಟ್ಟೆ, ಕೋಶಾಧಿಕಾರಿಯಾಗಿ ಜತ್ತಪ್ಪ ಗೌಡ ಪುರುಷರಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಮೀನಾಕ್ಷಿ ಮುಂಡೂರುರವರನ್ನು ಆಯ್ಕೆ ಮಾಡಲಾಯಿತು. ಕ್ಷೇತ್ರ ಸಮಿತಿಗೆ ಶಂಭು ಬಲ್ಯಾಯ, ಗೋವಿಂದ ನಾಯ್ಕ, ಜಯಲಕ್ಷ್ಮಿ ನರಿಮೊಗರು, ಮೀನಾಕ್ಷಿ ಮುಂಡೂರು, ಭಾರತಿ ಜಯಾನಂದ ಆಯ್ಕೆಯಾಗಿರುತ್ತಾರೆ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಭು ಬಲ್ಯಾಯ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here