ಅಮ್ಚಿನಡ್ಕ:ಗುಡ್ಡೆಗೆ ದಿಢೀರ್ ಬೆಂಕಿ ; ಬೆಂಕಿ ನಂದಿಸಿದ ಯುವಕರಿಬ್ಬರ ಸಾಹಸ

0

ಪುತ್ತೂರು: ಅಮ್ಚಿನಡ್ಕದಲ್ಲಿ ರಬ್ಬರ್ ಗುಡ್ಡೆ ಬಳಿ ದಿಢೀರನೆ ಬೆಂಕಿ ಹತ್ತಿಕೊಂಡದ್ದರಿಂದ ಹತ್ತಿರದ ನಿವಾಸಿಗಳು ಆತಂಕಿತರಾಗಿದ್ದಾರೆ. ಏ.10ರಂದು ಸಂಜೆ 6:30ರ ವೇಳೆಗೆ ಎನ್‌ಎಸ್‌ಯುಐ ಮುಖಂಡ ಎಡ್ವರ್ಡ್ ಡಿಸೋಜರವರ ಮನೆಯ ಸಮೀಪ ರಬ್ಬರ್ ಗುಡ್ಡೆ ಬಳಿ ಬೆಂಕಿ ಹೊತ್ತಿ ಉರಿದಿದೆ.

ಇದನ್ನು ಗಮನಿಸಿದ ಹತ್ತಿರದ ನಿವಾಸಿಯೊಬ್ಬರು ಬೊಬ್ಬೆ ಹೊಡೆದಾಗ ತಕ್ಷಣವೇ ವಿಷಯ ತಿಳಿದ ಎಡ್ವರ್ಡ್ ಡಿಸೋಜರವರು ತನ್ನ ಜೀವವನ್ನು ಲೆಕ್ಕಿಸದೆ, ಕೈಗೆ ಸಿಕ್ಕಿದ ವಸ್ತುಗಳಿಂದ ಬೆಂಕಿಯ ನಡುವೆಯೇ ನುಗ್ಗಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಸ್ಥಳೀಯ ಯುವಕ ಹರೀಶ್ ಎಂಬವರು ಸೇರಿ ಬೆಂಕಿ ನಂದಿಸುವ ಪ್ರಯತ್ನ ಮಾಡುವ ಮೂಲಕ ಸಂಭಾವ್ಯ ಬಹುದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.ಸ್ಥಳೀಯ ಮುಸ್ಲಿಂ ಯುವಕರೂ ಜೊತೆಸೇರಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here