ಹಿರಿಯ ಉದ್ಯಮಿ, ಕೃಷಿಕ ಯು. ಗಣಪತಿ ಶೆಟ್ಟಿ ನಿಧನ

0


ಉಪ್ಪಿನಂಗಡಿ: ಇಲ್ಲಿನ ಕೋಟೆ ಮನೆ ನಿವಾಸಿ, ಹಿರಿಯ ಉದ್ಯಮಿ, ಕೃಷಿಕ ಯು. ಗಣಪತಿ ಶೆಟ್ಟಿ ಅಲ್ಪ ಕಾಲದ ಅನಾರೋಗ್ಯದಿಂದಾಗಿ ಶನಿವಾರದಂದು 34ನೇ ನೆಕ್ಕಿಲಾಡಿಯ ಅಲಿಮಾರದಲ್ಲಿನ ಅವರ ತೋಟದ ಮನೆಯಲ್ಲಿ ನಿಧನರಾದರು.

ಉಪ್ಪಿನಂಗಡಿಯಲ್ಲಿ ನಶ್ಯ ಮಾರಾಟಗಾರರಾಗಿದ್ದ ಅವರು ಪೊಡಿ ಗಣಪಣ್ಣ ಎಂದೇ ಪ್ರಖ್ಯಾತರಾಗಿದ್ದರು. ಉದ್ಯಮ ಕ್ಷೇತ್ರದಿಂದ ವಿಮುಖರಾದ ಬಳಿಕ ಕೃಷಿ ಕ್ಷೇತ್ರದತ್ತ ಆಕರ್ಷಣೆಗೊಂಡ ಅವರು ಅಲಿಮಾರದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಯಶಸ್ವಿ ಕೃಷಿಕರಾಗಿಯೂ ಜನಪ್ರಿಯತೆ ಗಳಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಒರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here