ನಿಡ್ಪಳ್ಳಿ ಕಾಲೋನಿಯಲ್ಲಿ ಅಶೋಕ್ ಕುಮಾರ್‌ ರೈ ಮತಯಾಚನೆ

0

ಪುತ್ತೂರು: ಮೇ.10ರಂದು ಪುತ್ತೂರು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಶೋಕ್ ಕುಮಾರ್ ರೈ ಇಂದು ನಿಡ್ಪಳ್ಳಿ ದಳಿತ ಕಾಲೋನಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದ ಅವರು ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು, ಮುಂಚೂಣಿ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಗೆದ್ದು ಬಂದಲ್ಲಿ ನಮ್ಮೆಲ್ಲರ ನಿಮ್ಮೆಲ್ಲರ ಬೇಡಿಕೆಗಳನ್ನು ಈಡೇರಿಸುವುದಾಗಿ ನೆರೆದಿದ್ದ ನೂರಾರು ಕಾಲೋನಿ ನಿವಾಸಿಗಳಿಗೆ ಅಶೋಕ್ ರೈ ಭರವಸೆ ನೀಡಿದರು.

LEAVE A REPLY

Please enter your comment!
Please enter your name here