![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಜಂಕ್ಷನ್ ಬಳಿ ಬೈಕ್ ಮತ್ತು ಟೆಂಪೋ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
![](https://puttur.suddinews.com/wp-content/uploads/2023/05/aa297e35-6709-45f5-8f9a-9cbc87122248.jpg)
![](https://puttur.suddinews.com/wp-content/uploads/2023/05/3b6dc1f9-14a5-4e38-a330-b25993530910.jpg)
ಕುದ್ಮಾರು ಗ್ರಾಮದ ಶಾಂತಿಮೊಗರು ಜಂಕ್ಷನ್ ನಲ್ಲಿ ಕಳೆದ ಈ ಒಂದು ವರ್ಷದಲ್ಲಿ ಸುಮಾರು 10 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದೆ. ಎಲ್ಲಾ ಅಪಘಾತಗಳು ತೀವ್ರವಾಗಿದ್ದರೂ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವುದಷ್ಟೇ ಸಮಾಧಾನದ ವಿಷಯ. ಈ ಅಪಘಾತ ವಲಯದಲ್ಲಿ ಹಂಪ್ಸ್ ಹಾಕುವಂತೆ ಬೆಳಂದೂರು ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡು ಸಂಬಂಧ ಪಟ್ಟವರಿಗೆ ಮನವಿ ಕಳುಹಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾ ಪಂಚಾಯತ್ ಕೈಗೊಂಡಿರುವ ನಿರ್ಣಯದಂತೆ ಹಂಪ್ಸ್ ನಿರ್ಮಿಸಿ ಮುಂದೆ ನಡೆಯ ಬಹುದಾದ ಅನಾಹುತವನ್ನು ತಪ್ಪಿಸುವಂತೆ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಆಗ್ರಹಿಸಿದ್ದಾರೆ.