ಮತ ಎಣಿಕೆ ಆರಂಭ

0

ಜಿಲ್ಲೆಯ 60 ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಕ್ಷಣಗಣನೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಸೇರಿದಂತೆ ದ.ಕ.ಜಿಲ್ಲೆಯ 8 ಕ್ಷೇತ್ರಗಳಲ್ಲಿ ಒಟ್ಟು 60 ಮಂದಿ ಅಭ್ಯರ್ಥಿಗಳು ಈಗಾಗಲೇ ಚುನಾವಣೆ ಎದುರಿಸಿದ್ದು ಇವರೆಲ್ಲರ ರಾಜಕೀಯ ಭವಿಷ್ಯ ಇನ್ನು ಕೆಲ ಹೊತ್ತಿನಲ್ಲಿ ತಿಳಿಯಲಿದೆ.ಕಳೆದ ಎರಡು ದಿನಗಳಿಂದ ಮತಯಂತ್ರದೊಳಗೆ ಭದ್ರವಾಗಿದ್ದ ಮತಗಳ ಎಣಿಕೆ ಕಾರ್ಯ ಆರಂಭಗೊಂಡಿದ್ದು ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಫಲಿತಾಂಶ ಸರಿಸುಮಾರು ಸಮಯ 11,12ರ ಹೊತ್ತಿಗೆ ತಿಳಿಯುಬಹುದಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಶೋಕ್ ಕುಮಾರ್ ರೈ, ಬಿಜೆಪಿಯಿಂದ ಆಶಾತಿಮ್ಮಪ್ಪ ಗೌಡ, ಜೆಡಿಎಸ್‌ನಿಂದ ದಿವ್ಯಪ್ರಭಾ ಚಿಲ್ತಡ್ಕ, ಆಮ್ ಆದ್ಮಿಯಿಂದ ಡಾ|ಬಿ.ಕೆ.ವಿಶು ಕುಮಾರ್, ಎಸ್‌ಡಿಪಿಐನಿಂದ ಇಸ್ಮಾಯಿಲ್ ಶಾಫಿ ಬೆಳ್ಳಾರೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಐವನ್ ಫೆರಾವೋ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಅರುಣ್ ಕುಮಾರ್ ಪುತ್ತಿಲ, ಸುಂದರ ಕೊಯಿಲ ಚುನಾವಣೆ ಎದುರಿಸಿದ್ದಾರೆ.

ಸುಳ್ಯ:ಕಡಬ ತಾಲೂಕಿನ 46 ಗ್ರಾಮಗಳ ವ್ಯಾಪ್ತಿಯನ್ನೂ ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಭಾಗೀರಥಿ ಮುರುಳ್ಯ, ಕಾಂಗ್ರೆಸ್‌ನಿಂದ ಜಿ.ಕೃಷ್ಣಪ್ಪ, ಆಮ್ ಆದ್ಮಿಯಿಂದ ಸುಮನಾ ಬೆಳ್ಳಾರ್ಕರ್, ಜೆಡಿಎಸ್‌ನಿಂದ ಎಚ್.ಎಲ್.ವೆಂಕಟೇಶ್,ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗಣೇಶ್ ಎಂ.,ಉತ್ತಮ ಪ್ರಜಾಕೀಯದಿಂದ ರಮೇಶ್ ಬೂಡು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸುಂದರ ಮೇರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ ಚುನಾವಣೆ ಎದುರಿಸಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕಾಂಗ್ರೆಸ್‌ನಿಂದ ಬಿ.ರಮಾನಾಥ ರೈ, ಜೆಡಿಎಸ್‌ನಿಂದ ಪ್ರಕಾಶ್ ಗೋಮ್ಸ್, ಆಮ್ ಆದ್ಮಿ ಪಾರ್ಟಿಯಿಂದ ಪುರುಷೋತ್ತಮ ಗೌಡ ಕೋಲ್ಪೆ ಹಾಗೂ ಎಸ್‌ಡಿಪಿಐನಿಂದ ಇಲ್ಯಾಸ್ ಮೊಹಮ್ಮದ್ ಕಣದಲ್ಲಿದ್ದು ಚುನಾವಣೆ ಎದುರಿಸಿದ್ದಾರೆ.‌

ಬೆಳ್ತಂಗಡಿ: ಹರೀಶ್ ಪೂಂಜ-ಬಿಜೆಪಿ, ರಕ್ಷಿತ್ ಶಿವರಾಂ-ಕಾಂಗ್ರೆಸ್, ಅಶ್ರಫ್ ಅಲಿ ಕುಂಞ-ಜೆಡಿಎಸ್, ಅಕ್ಬರ್-ಎಸ್‌ಡಿಪಿಐ, ಜನಾರ್ದನ-ಆಮ್ ಆದ್ಮಿ,ಆದಿತ್ಯ ನಾರಾಯಣ ಕೊಲ್ಲಾಜೆ-ಸರ್ವೋದಯ ಕರ್ನಾಟಕ ಪಕ್ಷ, ಶೈಲೇಶ್ ಆರ್‌ಜೆ-ತುಳುವರೆ ಪಕ್ಷ, ಮಹೇಶ್-ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ.

ಮೂಡುಬಿದಿರೆ: ಮಿಥುನ್ ರೈ ಎಂ-ಕಾಂಗ್ರೆಸ್, ಉಮನಾಥ ಕೋಟ್ಯಾನ್-ಬಿಜೆಪಿ, ಅಮರಶ್ರೀ ಅಮರನಾಥ ಶೆಟ್ಟಿ-ಜೆಡಿಎಸ್,ಆಲೋನ್ಸೋ ಫ್ರಾಂಕೋ-ಎಸ್‌ಡಿಪಿಐ, ವಿಜಯನಾಥ ವಿಠಲ ಶೆಟ್ಟಿ-ಆಮ್ ಆದ್ಮಿ, ದಯಾನಂದ-ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಈಶ್ವರ ಎಸ್.,ದುರ್ಗಾಪ್ರಸಾದ್-ಪಕ್ಷೇತರರಾಗಿ ಸ್ಪರ್ದಿಸಿದ್ದಾರೆ.

ಮಂಗಳೂರು ನಗರ ಉತ್ತರ: ಇನಾಯತ್ ಅಲಿ-ಕಾಂಗ್ರೆಸ್, ಡಾ.ವೈ.ಭರತ್ ಶೆಟ್ಟಿ-ಬಿಜೆಪಿ, ಬಿ.ಎ.ಮೊಯ್ದಿನ್ ಬಾವ-ಜೆಡಿಎಸ್, ಸಂದೀಪ್ ಶೆಟ್ಟಿ-ಆಮ್ ಆದ್ಮಿ ಪಾರ್ಟಿ, ಧರ್ಮೇಂದ್ರ-ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ, ಬಿ.ಪ್ರವೀಣ್‌ಚಂದ್ರ ರಾವ್-ಹಿಂದುಸ್ತಾನ್ ಜನತಾ ಪಕ್ಷ ಸೆಕ್ಯುಲರ್, ಪ್ರಶಾಂತ್-ಉತ್ತಮ ಪ್ರಜಾಕೀಯ ಪಾರ್ಟಿ, ಯಶೋಧಾ-ಕರ್ನಾಟಕ ರಾಷ್ಟ್ರ ಸಮಿತಿ, ಎಚ್.ವಿನಯ ಆಚಾರ್ಯ, ಮ್ಯಾಕ್ಸಿಮ್ ಪಿಂಟೋ-ಪಕ್ಷೇತರರು.

ಮಂಗಳೂರು ನಗರ ದಕ್ಷಿಣ: ಡಿ.ವೇದವ್ಯಾಸ ಕಾಮತ್-ಬಿಜೆಪಿ, ಜೆ.ಆರ್.ಲೋಬೊ-ಕಾಂಗ್ರೆಸ್, ಕೆ.ಸಂತೋಷ್ ಕಾಮತ್-ಆಮ್ ಆದ್ಮಿ ಪಾರ್ಟಿ, ಸುಮತಿ ಎಸ್.ಹೆಗ್ಡೆ-ಜೆಡಿಎಸ್, ಧರ್ಮೇಂದ್ರ-ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ, ಸುಪ್ರೀತ್ ಕುಮಾರ್ ಪೂಜಾರಿ-ಜನಹಿತ ಪಕ್ಷ, ವಿನ್ನಿ ಪಿಂಟೋ-ಕರ್ನಾಟಕ ರಾಷ್ಟ್ರ ಸಮಿತಿ, ಕೆ.ಎಸ್.ಪೈ-ಪಕ್ಷೇತರ.

ಮಂಗಳೂರು: ಯು.ಟಿ.ಖಾದರ್-ಕಾಂಗ್ರೆಸ್, ಸತೀಶ್ ಕುಂಪಲ-ಬಿಜೆಪಿ, ಮುಹಮ್ಮದ್ ರಿಯಾಝ್-ಎಸ್‌ಡಿಪಿಐ, ಮುಹಮ್ಮದ್ ಅಶ್ರ–ಆಮ್ ಆದ್ಮಿ ಪಾರ್ಟಿ,ದೀಪಕ್ ರಾಜೇಶ್ ಕುವೆಲ್ಲೋ-ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದು ಇವರಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯದ್ದಾಳೆ, ಯಾರ ಕೊರಳಿಗೆ ವಿಜಯ ಮಾಲೆ ಬೀಳಲಿದೆ ಎನ್ನುವ ಚಿದಂಬರ ರಹಸ್ಯ ಇಂದು ಬಹಿರಂಗಗೊಳ್ಳಲಿದೆ.

LEAVE A REPLY

Please enter your comment!
Please enter your name here