‘ದಮ್ ಇದ್ದರೆ, ನಾವು ಪೊಲೀಸರಿಗೆ ಒತ್ತಡ ಹೇರಿಲ್ಲವೆಂದು ಡಿವಿ, ಮಠಂದೂರು, ನಳಿನ್ ಮಹಾಲಿಂಗೇಶ್ವರನ ನಡೆಯಲ್ಲಿ ಪ್ರಮಾಣ ಮಾಡಲಿ’; ಹೀಗೊಂದು ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

0

ಪುತ್ತೂರು:ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕುರಿತ ಅವಹೇಳನಕಾರಿ ಬ್ಯಾನರ್ ವಿಚಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ದೌರ್ಜನ್ಯ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಮಾತನಾಡುವ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ‘ದಮ್ ಇದ್ದರೆ, ಈ ಪ್ರಕರಣದಲ್ಲಿ ನಾವು ಫೋನ್ ಮಾಡಿ ಪೊಲೀಸರಿಗೆ ಒತ್ತಡ ಹೇರಿಲ್ಲ, ಹಲ್ಲೆ ಮಾಡಲು ತಿಳಿಸಿಲ್ಲ ಎಂದು ಡಿ.ವಿ.ಸದಾನಂದ ಗೌಡ, ಸಂಜೀವ ಮಠಂದೂರು, ನಳಿನ್ ಕುಮಾರ್ ಮಹಾಲಿಂಗೇಶ್ವರನ ನಡೆಯಲ್ಲಿ ಪ್ರಮಾಣ ಮಾಡಲಿ. ಆಗ, ಇವರ ಮೇಲೆ ನಮಗೆ ನಂಬಿಕೆ ಬರುತ್ತದೆ’ ಎಂದು ಆಡಿಯೋದಲ್ಲಿ ಹೇಳಲಾಗುತ್ತಿದೆ.

ಅರುಣಣ್ಣನನ್ನು ಮೋದಿ ಟೀಮ್‌ಗೆ ಹೋಗಲು ಇದೆಲ್ಲವನ್ನೂ ಮಹಾಲಿಂಗೇಶ್ವರನೇ ಡಿವಿ, ನಳಿನ್, ಮಠಂದೂರು ಮೂಲಕ ಮಾಡಿಸೋದು. ನೀನು ಇಲ್ಲಿ ಬೇಡ, ಮೋದಿ ಟೀಮ್‌ಗೆ ಹೋಗಬೇಕು ಎಂದು ಮಹಾಲಿಂಗೇಶ್ವರ ಅರುಣಣ್ಣನಿಗೆ ಅನುಗ್ರಹಿಸಿ ಇವರ ಮೂಲಕ ಈ ರೀತಿ ಮಾಡಿಸೋದು. ಈ ರೀತಿ ನಾನಾ ವಿಷಯಗಳ ಚರ್ಚೆಯೊಂದಿಗೆ ಸುಮಾರು 8.25 ನಿಮಿಷಗಳ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸದ್ದು ಮಾಡುತ್ತಿದೆ.

LEAVE A REPLY

Please enter your comment!
Please enter your name here