![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ದೋಳ್ಪಾಡಿ – ಕೂರೇಲು – ಶೇರ ತನಕ ವಿದ್ಯುತ್ ತಂತಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳನ್ನು ಜೂ 18ರಂದು ತೆರವುಗೊಳಿಸಲಾಯಿತು. ಮೆಸ್ಕಾಂ ಸಿಬ್ಬಂದಿಗಳಾದ ಸಂತೋಷ್ ಮತ್ತು ಶಿವಾನಂದ ಅವರ ಜೊತೆ ಪರಮೇಶ್ವರ ಮರಕ್ಕಡ, ಎಂ. ಜಿ. ವೆಂಕಟ್ರಮಣ, ಹರಿಂದ್ರನಾಥ ರೈ ದೋಳ್ಪಾಡಿ, ಚಿನ್ನಪ್ಪ ಶೇರ, ಪುರುಷೋತ್ತಮ ಕೊಜಂಬೇಡಿ, ಶಿವರಾಮ ದೋಳ್ಪಾಡಿ, ಜಯಸೂರ್ಯ ಭಟ್, ಮಾರಪ್ಪ ಶೆಟ್ಟಿ, ರಾಮಣ್ಣ ಕೂರೇಲು ಹಾಗೂ ಕೂರೇಲು ಬಳಗ, ಶೇರ ಮತ್ತು ದೋಳ್ಪಾಡಿ ಬಳಗ, ದೋಳ್ಪಾಡಿ ಅರುಣೋದಯ ಯುವಕ ಮಂಡಲದ ಸದಸ್ಯರು ಸೇರಿದಂತೆ ಸುಮಾರು 60ಕ್ಕೂ ಮಿಕ್ಕಿ ಮಂದಿ ಸಹಕರಿಸಿದರು.