ಕಡ್ತಿಮಾರ್ ರಸ್ತೆಯಲ್ಲಿ ಮೋರಿಕುಸಿತ- ಸ್ಥಳಕ್ಕೆ ಒಳಮೊಗ್ರು ವಲಯಾಧ್ಯಕ್ಷರ ಭೇಟಿ

0

ಪುತ್ತೂರು: ಭಾರೀ ಮಳೆಗೆ ಒಳಮೊಗ್ರು ಗ್ರಾಮದ ಕಡ್ತಿಮಾರ್ ರಸ್ತೆಯಲ್ಲಿ ಕೆಲತಿಂಗಲ ಹಿಂದೆ ಹಾಕಲಾಗಿದ್ದ ಮೋರಿ ಕುಸಿತಕ್ಕೊಳಗಾಗಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಮೋರಿ ಕುಸಿತಕ್ಕೊಳಗಾದ ಸ್ಥಳಕ್ಕೆ ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಸಿತಕ್ಕೊಳಗಾದ ಮೋರಿಯನ್ನು ದುರಸ್ಥಿಮಾಡಲಾಗಿದ್ದು ಜಲ್ಲಿ ಹಾಕುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಸಂದರ್ಭದಲ್ಲಿ ಕುಂಬ್ರದ ಎಲೆಕ್ಟ್ರಿಷಿಯನ್ ಸಾದಿಕ್ ಮಗಿರೆ, ಇಂಜನಿಯರ್ ಅರ್ಷದ್ ಕುಂಬ್ರ ಉಪಸ್ತಿತರಿದ್ದರು. ಈ ರಸ್ತೆಯನ್ನು ಕಾಂಕ್ರೀಟ್ ಮಾಡಲು ಈಗಾಗಲೇ ಶಾಕರಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ಮಳೆಗಾಲ ಮುಗಿದ ತಕ್ಷಣ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಲಿದೆ ಎಂದು ಅಶೋಕ್ ಬೊಳ್ಳಾಡಿ ತಿಳಿಸಿದರು.

LEAVE A REPLY

Please enter your comment!
Please enter your name here