ಕೃಷಿಕ ಖಾಸಿಂ ಬಾರ್ತಕುಮೇರು ನಿಧನ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಬಾರ್ತಕುಮೇರು ದಿ.ಇ.ಕೆ ಮೊಹಮ್ಮದ್ ರವರ ಪುತ್ರ, ಕೃಷಿಕ, ಉಪ್ಪಳಿಗೆ ಶ್ರೀ ವಿಷ್ಣು ಯುವಕ ಮಂಡಲದ ಸಕ್ರಿಯ ಸದಸ್ಯ ಇ.ಕೆ ಖಾಸಿಂ ಜು.25ರಂದು ಹೃದಯಾಘಾತದಿಂದ ವಿಟ್ಲ ಸಮೀಪದ ಕೊಡಂಗಾಯಿಯಲ್ಲಿರುವ ಪತ್ನಿ ಮನೆಯಲ್ಲಿ ನಿಧನರಾದರು.

ಕಳೆದ ಕೆಲ ಸಮಯಗಳಿಂದ ಕೊಡಂಗಾಯಿಯ ಪತ್ನಿ ಮನೆಯಲ್ಲಿ ವಾಸ್ತವ್ಯವಿರುವ ಖಾಸಿಂರವರಿಗೆ ಬೆಳಿಗ್ಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ವಿಟ್ಲ ಆಸ್ಪತ್ರೆಗೆ ಕರೆ ತರಲಾಗಿತ್ತಾದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ,‌ ಓರ್ವ ಸಹೋದರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here