ಪುತ್ತೂರು ಜನತಾ ಕಬ್ಬಿನ ಹಾಲು ಅಂಗಡಿ ಮಾಲಕರಾಗಿದ್ದ ಕೆ.ನಾರಾಯಣ ಶೆಟ್ಟಿ ನಿಧನ

0

ಪುತ್ತೂರು: ಪುತ್ತೂರು ಹಳೆ ನಗರ ಪೊಲೀಸ್ ಸ್ಟೇಷನ್ ಇರುವ ಕಟ್ಟಡದ ಬಳಿಯ ಜನತಾ ಕಬ್ಬಿನ ಹಾಲು ಅಂಗಡಿಯ ಮಾಲಕರಾಗಿದ್ದ ಕೆ.ನಾರಾಯಣ ಶೆಟ್ಟಿಯವರು ಆ.6ರಂದು ಸ್ವಗೃಹದಲ್ಲಿ ನಿಧನರಾದರು.

ಪುತ್ತೂರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಂಚವಟಿಯ ಬಳಿಯ ನಿವಾಸಿಯಾಗಿರುವ ಕೆ.ನಾರಾಯಣ ಶೆಟ್ಟಿಯವರು ಜನಸಂಘದ ಕಾರ್ಯಕರ್ತರಾಗಿದ್ದು, ತುರ್ತುಪರಿಸ್ಥಿತಿಯಲ್ಲಿ ಜೈಲು ಸೇರಿದ್ದರು. ಅವರು ಪುತ್ತೂರು ಮಾಜಿ ಪುರಸಭೆಯ ಸದಸ್ಯರಾಗಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆರಂಭದ ದಿನಗಳ ಸದಸ್ಯರಾಗಿದ್ದರು.

ಸಮಾಜ ಸೇವಾ ಚಟುವಟಿಕೆಯಲ್ಲಿ ವೈಯುಕ್ತಿಕವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಹೇಮಾವತಿ, ಪುತ್ರ ಶಿವರಾಜ್, ಪುತ್ರಿಯರಾದ ಮಧುಮತಿ, ಭವ್ಯ, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here