![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಯುವ ಬರಹಗಾರ, ಕವಿ, ಆಮಿರ್ ಬನ್ನೂರು ಅವರ `ಕಣ್ಣೀರಿಗೆ ಊರು ತುಂಬದಿರಲಿ’ ಎಂಬ ಕವನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಕಾಂ/ಬಿ.ಬಿ.ಎ/ಐ.ಎಂ.ಬಿ ನಾಲ್ಕನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಮುದ್ರಣಗೊಂಡಿದೆ.
`ಕಣ್ಣೀರಿಗೆ ಊರು ತುಂಬದಿರಲಿ’ ಕವನವು ಸತಿಪತಿಯರ ಬಂಧ, ಸಂಬಂಧ ಕೇವಲ ದೈಹಿಕವಾಗಿರದೇ ಬದುಕನ್ನು ಬೆಸೆಯುವ ಕೊಂಡಿಯಾಗಿರುವುದು. ಜೊತೆಗೆ ನಂಬಿಕೆ, ಪ್ರೀತಿ ಆಳವಾಗಿ ಬೇರೂರಿದಾಗಲೇ ಅದಕ್ಕೆ ಅರ್ಥ ಬರುವುದು ಎನ್ನುತ್ತದೆ. ಕೆ.ಎ ಆಮಿರ್ ಮೂಲತಃ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ನಿವಾಸಿಯಾಗಿದ್ದು ಕೆ.ಎಚ್ ಅಬ್ದುಲ್ಲ ಮುಸ್ಲಿಯಾರ್ ಮತ್ತು ಖತೀಜ ದಂಪತಿ ಪುತ್ರ. ಪ್ರೌಢ ಶಿಕ್ಷಣವನ್ನು ಹಾರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಉನ್ನತ ವಿದ್ಯಾಭ್ಯಾಸವನ್ನು ಅರಬಿಕ್ ಭಾಷೆಯಲ್ಲಿ ಕೇರಳದ ಕಲ್ಲಿಕೋಟೆಯಲ್ಲಿರುವ ಸಿರಾಜುಲ್ ಹುದಾ ಕುಟ್ಯಾಡಿಯಲ್ಲಿ ಪ್ರಾರಂಭಿಸಿದರು. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸುರಿಬೈರಿನಲ್ಲಿರುವ ದಾರುಲ್ ಅಶ್ ಅರಿಯ್ಯದಲ್ಲಿ ಅರಬಿಕ್ ಪದವಿಯನ್ನು ಮುಗಿಸುವುದರ ಮೂಲಕ ಹನೀಫಿ ಅಲ್ ಅಶ್ಅರೀ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಧಾರ್ಮಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.