ಪುತ್ತೂರು: ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಪಟ್ಟ ಬಾಲಕ ಮೃತಪಡಲು ಆಸ್ಪತ್ರೆಯ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಚೇತನ ಆಸ್ಪತ್ರೆಯ ಮುಂದೆ ದಲಿತ ಸೇವಾ ಸಮಿತಿ ಸಹಿತ ಮೃತರ ಸಂಬಂಧಿಕರಿಂದ ಮೃತ ದೇಹ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.ಎ ಸಿ ಅಥವಾ ಶಾಸಕರು ಬಂದು ಮನವಿ ಸ್ವೀಕರಿಸಬೇಕು ಹಾಗು ಆಸ್ಪತ್ರೆಯ ವೈದ್ಯರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ

