ಆ.27:ಕಾರ್ಜಾಲು ಗದ್ದೆಯಲ್ಲಿ ಬಿರುವೆರ್ನಾ ಕೆಸರ್ದ ಗೊಬ್ಬು ಗ್ರಾಮೀಣ ಕ್ರೀಡೆ ಕಾರ್ಯಕ್ರಮ

0

ಪುತ್ತೂರು : ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಸಂಘ ರಿ , ಪುತ್ತೂರು ಹಾಗೂ ಕಬಕ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ “ಬಿರುವೆರ್ನಾ ಕೆಸರ್ದ ಗೊಬ್ಬು ‘ ಗ್ರಾಮೀಣ ಕ್ರೀಡಾಕೂಟವು ಆ. 27ರಂದು ಪುತ್ತೂರಿನ ಕಾರ್ಜಾಲು ಗದ್ದೆಯಲ್ಲಿ ನಡೆಯಲಿದೆ .


ಕಾರ್ಯಕ್ರಮದ ಉದ್ಘಾಟನೆಯನ್ನು ಬಿಲ್ಲವ ಗ್ರಾಮ ಸಮಿತಿ ಕಬಕ ಇದರ ಸ್ಥಾಪಾಕಧ್ಯಕ್ಷರಾದ ಜಿನ್ನಪ್ಪ ಪೂಜಾರಿ ಮುರ ಇವರು ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು
ಕಬಕ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ವಸಂತ ಪೂಜಾರಿ ಸೇವಿರೆ ವಹಿಸಲಿದ್ದು , ಮುಖ್ಯ ಅತಿಥಿಗಳಾಗಿ ಶಾಸಕ ಆಶೋಕ್ ಕುಮಾರ್ ರೈ , ಮೆಸ್ಕಾಂ ಮಾಜಿ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ , ನಗರಸಭಾ ನಿಕಟಪೂರ್ವ ಆಧ್ಯಕ್ಷ ಜೀವಂಧರ್ ಜೈನ್, ಬನ್ನೂರು ರೈತರ ಸೇವಾ ಸಹಕಾರಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ , ಕಬಕ ಬಿಲ್ಲವ ಗ್ರಾಮ ಸಮಿತಿಯ ಮಾಜಿ ಉಪಾಧ್ಯಕ್ಷ ವಸಂತ ಪೂಜಾರಿ , ಶೇಖರ ಪೂಜಾರಿ ಪಟ್ಲ ಹಾಗೂ ಪ್ರವೀಣ ಪೂಜಾರಿ ಬಿರಾವು ಭಾಗವಹಿಸಲಿರುವರು.

ಸಾಯಂಕಾಲ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಬಕ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ವಹಿಸಲಿದ್ದು , ಪ್ರಧಾನ ಭಾಷಣಕಾರರಾಗಿ ಶ್ರೀ ನಾರಾಯಣ ಗುರು ವಿಚಾರಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಭಾಗವಹಿಸಲಿರುವರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ,ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕೆಡೆಂಜಿ ,ಅಕ್ಷಯ ಕಾಲೇಜು ಇದರಅಧ್ಯಕ್ಷರಾದ ಜಯಂತ ನಡುಬೈಲು ,ಗುರುದೇವ ಸಹಕಾರಿ ಬ್ಯಾಂಕ್ ಬೆಳ್ತಂಗಡಿ ಇದರ ನಿರ್ದೇಶಕರಾದ ಡಾ. ರಾಜಾರಾಮ ಕೆ.ಬಿ ,ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ವಿಮಲ ಸುರೇಶ್ ,ಬಿಲ್ಲವ ಮಹಿಳಾ ವೇದಿಕೆ ಕಬಕ ಗ್ರಾಮದ ಅಧ್ಯಕ್ಷೆ ಯಶೋಧ ಬಿರಾವು ,ಕಬಕ ಗೀತಾ ಬಾರ್ ಮಾಲಕ ರಾಮನ ಪೂಜಾರಿ ,ಪುತ್ತೂರು ಬಿಲ್ಲವ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ,

ಶ್ರೀ ಗೆಜ್ಜೆಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ , ವಿಷ್ಣು ಮೆಟಲ್ಸ್ ಮಾಲಕ ಕೇಶವ ಪೂಜಾರಿ ಮುರ ,ವಲಯ ಸಂಚಾಲಕ ಅಣ್ಣಿ ಪೂಜಾರಿ ಹಾಗೂ ಸೇಸಪ್ಪ ಪೂಜಾರಿ ಪಟ್ಲ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸ್ಪರ್ಧೆಗಳ ವಿವರ :
ವಾಲಿಬಾಲ್ , ನಿಧಿ ಶೋಧನೆ, ಹಿಮ್ಮುಖ ಓಟ , ಹಗ್ಗ ಜಗ್ಗಾಟ , ಮಡಕೆ ಓಡೆಯುವುದು ,ಓಟ ,ಗೂಟ ಓಟ , ಸಂಗೀತ ಕುರ್ಚಿ ಹಾಗೂ ಹಾಳೆ ಎಳೆಯುವ ಇದು ಮತ್ತು ಬಾಲ್ ಪಾಸಿಂಗ್ ಸ್ಪರ್ಧೆಗಳು ಜರುಗಲಿದ್ದು ,ಆಸಕ್ತರು ಮೊಬೈಲ್ ಸಂಖ್ಯೆ 9900977387 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here