ಎಸ್.ಎಂ.ಎ ಪುತ್ತೂರು ರೀಜನಲ್ ವಾರ್ಷಿಕ ಕೌನ್ಸಿಲ್-ನೂತನ ಪಧಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಶಿಹಾಬ್ ರೆಹಮಾನ್, ಪ್ರ.ಕಾರ್ಯದರ್ಶಿ: ದಾವೂದ್ ಅಶ್ರಫಿ, ಕೋಶಾಧಿಕಾರಿ: ಇಬ್ರಾಹಿಂ ಎ.ಆರ್

ಪುತ್ತೂರು: ಸುನ್ನಿ ಮೆನೇಜ್ಮೆಂಟ್ ಅಸೋಸಿಯೇಷನ್ ಪುತ್ತೂರು ರೀಜನಲ್ ಇದರ ವಾರ್ಷಿಕ ಕೌನ್ಸಿಲ್ ಪುತ್ತೂರು ರೀಜನಲ್ ಅಧ್ಯಕ್ಷ ಶಿಹಾಬ್ ರೆಹಮಾನ್ ಹಸನ್‌ನಗರ ಅವರ ಅಧ್ಯಕ್ಷತೆಯಲ್ಲಿ ಬನ್ನೂರು ಸುನ್ನಿ ಸೆಂಟರ್‌ನಲ್ಲಿ ನಡೆಯಿತು.


ಎಸ್‌ಎಂಎ ರಾಜ್ಯ ಕೋಶಾಧಿಕಾರಿ ಹಮೀದ್ ಹಾಜಿ ಕೊಡಂಗಾಯಿ ಮತ್ತು ಝೋನಲ್ ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ ವೀಕ್ಷಕರಾಗಿ ಆಗಮಿಸಿದ್ದರು. ರೀಜನಲ್ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸಅದಿ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಅಧ್ಯಕ್ಷಾಗಿ ಶಿಹಾಬ್ ರೆಹಮಾನ್ ಹಸನ್‌ನಗರ, ಪ್ರಧಾನ ಕಾರ್ಯದರ್ಶಿಯಾಗಿ ದಾವೂದ್ ಅಶ್ರಫಿ ಅಳಕೆಮಜಲ್ ಹಾಗೂ ಕೋಶಾಧಿಕಾರಿಯಾಗಿ ಇಬ್ರಾಹಿಂ ಎ.ಆರ್ ಅರಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹಾಜಿ ಶೇಖಬ್ಬ ಕೋಲ್ಪೆ, ಅಬ್ಬಾಸ್ ಹಾಜಿ ಅರಿಯಡ್ಕ ಮತ್ತು ಉಮರ್ ಹಾಜಿ ಅಳಕೆಮಜಲ್. ಜೊತೆ ಕಾರ್ಯದರ್ಶಿಗಳಾಗಿ ಮಹಮ್ಮದ್ ರಫೀಕ್ ಸಖಾಫಿ ಬನ್ನೂರು ಮತ್ತು ಅಬ್ದುಲ್ ಮಜೀದ್ ಬನ್ನೂರು ಅವರನ್ನು ಆಯ್ಕೆ ಮಾಡಲಾಯಿತು.


ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಯೂಸುಫ್ ಗೌಸಿಯಾ, ಇಸ್ಮಾಯಿಲ್ ಹಾಜಿ ಬನ್ನೂರು, ಶರೀಫ್ ಸಖಾಫಿ ಅಳಕೆಮಜಲ್, ಸಲೀಂ ಸಅದಿ ಕಾರ್ಯಾಡಿ, ಫಾರೂಕ್ ಮದನಿ ಮೈದಾನಿಮೂಲೆ, ಅಬ್ದುಲ್ಲ ಮುಸ್ಲಿಯಾರ್ ಬನ್ನೂರು, ಅಬ್ದುಲ್ ರಹ್ಮಾನ್ ಮದನಿ ಬನ್ನೂರು, ಸಿನಾನ್ ಸಅದಿ ಈಶ್ವರಮಂಗಳ, ಯೂಸುಫ್ ಅರಿಯಡ್ಕ, ನಿಝಾಮ್ ಬನ್ನೂರು, ಮುನೀರ್ ಬೀಟಿಗೆ, ಹಮೀದ್ ಕಾರ್ಯಾಡಿ, ಬಾತಿಷ ಅಳಕೆಮಜಲ್, ಯೂಸುಫ್ ಬೀಟಿಗೆ, ಹೈದರ್ ಅಳಕೆಮಜಲ್, ಅಬ್ದುಲ್ ರಹೀಮ್ ಬನ್ನೂರು, ಆಸಿಫ್ ಕೋಲ್ಪೆ ಮೊದಲಾದವರನ್ನು ಆಯ್ಕೆ ಆರಿಸಲಾಯಿತು. ಸುಲೈಮಾನ್ ಸಅದಿ ಸ್ವಾಗತಿಸಿದರು. ದಾವೂದ್ ಅಶ್ರಫಿ ವಂದಿಸಿದರು.

LEAVE A REPLY

Please enter your comment!
Please enter your name here