ಉಪ್ಪಿನಂಗಡಿ: ಸ.ಮಾ.ಉ.ಹಿ.ಪ್ರಾ.ಶಾಲಾ ಬಳಿ ಇರುವ ಮರದ ಗೆಲ್ಲು ತೆರವು

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆಜಿ ಕೇಂದ್ರದ ಬಳಿ ಸಾಗುವಾನಿ ಮರದ ಗೆಲ್ಲೊಂದು ತುಂಡಾಗಿ ಬಿದ್ದಿದ್ದು, ಇದನ್ನು ಗೃಹರಕ್ಷಕರನ್ನೊಳಗೊಂಡ ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡದವರು ತೆರವುಗೊಳಿಸಿದರು.
ನಿನ್ನೆ ರಾತ್ರಿ ಸಾಗುವಾನಿ ಮರದ ಗೆಲ್ಲೊಂದು ತುಂಡಾಗಿ ಎಲ್‌ಕೆಜಿ ಕೇಂದ್ರದ ಬಳಿಯೇ ಬಿದ್ದಿದ್ದು, ಈ ಕೇಂದ್ರಕ್ಕೆ ಬರಲು ತಡೆಯೊಡ್ಡಿತ್ತು. ಇದರ ಮಾಹಿತಿ ಪಡೆದ ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ ಅವರ ಸೂಚನೆಯಂತೆ ಪ್ರವಾಹ ರಕ್ಷಣಾ ತಂಡದ ದಿನೇಶ್ ಬಿ., ಶಿವಪ್ರಸಾದ್ ಹಾಗೂ ಸಮದ್ ಅವರು ಶಾಲಾರಂಭದ ಮುನ್ನವೇ ಅಲ್ಲಿಗೆ ತೆರಳಿ ಗೆಲ್ಲನ್ನು ತೆರವುಗೊಳಿಸಿದರು.

LEAVE A REPLY

Please enter your comment!
Please enter your name here