ಚಿನ್ನದ ಪ್ರಭಾವಳಿ ಹಾಗೂ ಗುಡಿ ನಿರ್ಮಾಣದ ಕೊಡುಗೆ – ಕುಕ್ಕೆಯಲ್ಲಿ ಆಂಧ್ರಪ್ರದೇಶದ ಮಹೇಶ್ ರೆಡ್ಡಿ ಘೋಷಣೆ

0

ಸುಬ್ರಹ್ಮಣ್ಯ : ಮುಂದಿನ ದಿನಗಳಲ್ಲಿ ದೇವಳದ ಸುತ್ತುಪೌಳಿ ನಿರ್ಮಾಣದ ಸಂದರ್ಭದಲ್ಲಿ ತಾನು ಕಾಲಭೈರವೇಶ್ವರ ಗುಡಿಯನ್ನು ನಿರ್ಮಿಸಿ ಕೊಡುವುದಾಗಿ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿಯನ್ನು ನೀಡುವುದಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತ, ಹೈದರಾಬಾದ್ ಎಎಂಆರ್ ಇಂಡಿಯಾ ಲಿಮಿಟೆಡ್‌ನ ಎ.ಮಹೇಶ್ ರೆಡ್ಡಿ ಸೆ.12ರಂದು ಹೇಳಿದರು.


ಅವರು ಈ ಹಿಂದೆ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದ ಪುಂಗನೂರು ತಳಿಯ ಗೋವುಗಳನ್ನ ಆಶ್ಲೇಷದ ಶುಭದಿನದಂದು ಹಸ್ತಾಂತರಿಸಿ ಬಳಿಕ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪುಂಗನೂರು ತಳಿಯ ಗೋವುಗಳನ್ನು ಶ್ರೀ ದೇವಳದಲ್ಲಿ ನಡೆಯುವ ಗೋಪೂಜೆ ಹಾಗೂ ಮುಂದೆ ಸರ್ಪ ಸಂಸ್ಕಾರ ಯಾಗ ಶಾಲೆಯಲ್ಲಿ ನಡೆಯುವ ಗೋಪೂಜೆಗೆ ಉಪಯೋಗಿಸಿಕೊಳ್ಳುವುದಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ತಿಳಿಸಿದರು. ಮಹೇಶ್ ರೆಡ್ಡಿ ಅವರ ಪತ್ನಿ ಎ.ರಾಧಿಕಾ, ನಂದಕಿಶೋರ್ ರೆಡ್ಡಿ ನೆಲ್ಲೂರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ವನಜ ವಿ.ಭಟ್, ಶೋಭಾ ಗಿರಿಧರ್, ಮನೋಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪುಂಗನೂರು ತಳಿಗೆ ಗೋವುಗಳಿಗೆ ಪೂಜೆ ನೆರವೇರಿಸಿ ದೇವಳಕ್ಕೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here