ವಿಟ್ಲ: ಜಾತಿ ನಿಂದನೆ, ಜೀವಬೆದರಿಕೆ ಆರೋಪ- ದೂರು ದಾಖಲು

0

ಪುತ್ತೂರು:ವಿಟ್ಲ ಪೊಲೀಸ್‌ ಠಾಣೆಯಲ್ಲಿ ಜಯಪ್ರಕಾಶ್‌ ನಾಯಕ್‌ ಮತ್ತು ಭೋಜ ಎಂಬವರ ವಿರುದ್ದ ಜಾತಿ ನಿಂದನೆ, ಹಲ್ಲೆ ಮತ್ತು ಜೀವ ಬೆದರಿಕೆ ಹಾಕಿರುವ ಬಗ್ಗೆ ಕೇಸು ದಾಖಲಾಗಿದೆ .

ಸೆ.13ರಂದು ವಿಟ್ಲಮುಡ್ನೂರು ಗ್ರಾಮದ ನಿವಾಸಿ ಎನ್‌ ಗೋವಿಂದ ನಾಯ್ಕ್(60.ವ) ಎಂಬವರು ಕೇಪು ಗ್ರಾಮದ ದೇವುಮೂಲೆ ಎಂಬಲ್ಲಿರುವ ತನ್ನ ತೋಟಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವ ವೇಳೆ ವಿಟ್ಲಮುಡ್ನೂರಿನ ನಾಟೆಕಲ್ಲು ಎಂಬಲ್ಲಿ ಜಯಪ್ರಕಾಶ್‌ ನಾಯಕ್‌ ಮತ್ತು ಭೋಜ ಹಾಲು ಉತ್ಪಾದಕರ ಸಂಘದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ಗೋವಿಂದ ನಾಯ್ಕ್ ವಿಟ್ಲ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಅ.ಕ್ರ: 160/2023 ಕಲಂ: 3(1)(r),3(1)(s) The SC/ST PA Act-2015 ಹಾಗೂ 323,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here