ಕಾಂಚನ ನಡ್ಪ ದೇವಸ್ಥಾನದಲ್ಲಿ ನವಾನ್ನ, ’ಇ ಹುಂಡಿ’ ಉದ್ಘಾಟನೆ

0

ನೆಲ್ಯಾಡಿ: ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವಾನ್ನ ಕಾರ್ಯಕ್ರಮ ಅ.19ರಂದು ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಉಪ್ಪಿನಂಗಡಿ ಶಾಖೆಯಿಂದ ದೇವಸ್ಥಾನದ ಖಾತೆಗೆ ಆನ್‌ಲೈನ್ ಮೂಲಕ ಹಣ ಪಾವತಿಗೆ ಅನುಕೂಲವಾಗುವಂತೆ ಅಳವಡಿಸಿರುವ ’ ಇ ಹುಂಡಿ’ ವ್ಯವಸ್ಥೆಯ ಉದ್ಘಾಟನೆ ಮಾಡಲಾಯಿತು.


ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಬಡಿಕ್ಕಿಲ್ಲಾಯರವರು ಉದ್ಘಾಟಿಸಿದರು. ಬ್ಯಾಂಕಿನ ಮೇನೇಜರ್ ನಾಗರಾಜರವರು ಮಾಹಿತಿ ನೀಡಿದರು. ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಶ್ರೀಧರ ಗೌಡ ನಡ್ಪರವರು ಮೇನೇಜರ್ ಅವರನ್ನು ಗೌರವಿಸಿದರು. ಟ್ರಸ್ಟಿಗಳಾದ ಸುಧಾಕೃಷ್ಣ, ಜಗದೀಶ ರಾವ್, ಲೋಕೇಶ ಗೌಡ, ಕೆ.ವಿ.ಕಾರಂತ, ದುಗ್ಗಪ್ಪ ಗೌಡ, ಶಿವಣ್ಣ ಗೌಡ, ಕುಶಾಲಪ್ಪ ಗೌಡ, ಸುಮನ ಬಡಿಕ್ಕಿಲ್ಲಾಯ, ’ಇ ಹುಂಡಿ ’ ವ್ಯವಸ್ಥೆಗೆ ಸಹಕರಿಸಿದ ಹರಿಕೃಷ್ಣ ಹಾಗೂ ಉಪಟ್ರಸ್ಟಿಗಳು, ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ಟ್ರಸ್ಟ್‌ನ ಉಪಾಧ್ಯಕ್ಷ ಶಿವರಾಮ ಕಾರಂತ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here