ತಾಲೂಕು ಮಟ್ಟದ ಕ್ರೀಡಾಕೂಟ-ವಿವೇಕಾನಂದ ಆ.ಮಾ ವಿದ್ಯಾರ್ಥಿ ಸಾತ್ವಿಕ್ ಆರ್ ವೈಯುಕ್ತಿಕ ಚಾಂಪಿಯನ್‌

0

ಪುತ್ತೂರು: ಹಿರೇಬಂಡಾಡಿಯಲ್ಲಿ ಜರಗಿದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ, ಫ್ರೌಢಶಾಲಾ ಬಾಲಕ -ಬಾಲಕಿಯರ ಕ್ರೀಡಾಕೂಟದಲ್ಲಿ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಆರ್ 3 ಚಿನ್ನದ ಪದಕದೊಂದಿಗೆ 17 ವರ್ಷ ಕೆಳಗಿನ ವಯೋಮಾನದ ವೈಯುಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ. ಲಾಂಗ್ ಜಂಪ್, ಟ್ರಿಪಲ್ ಜಂಪ್, ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಹಾಗೂ 4*100 ಮೀ. ರಿಲೇಯಲ್ಲಿ ಚಿನ್ನದ ಪದಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.ಇವರು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್ ಸಿ ನಾರಾಯಣ ರೆಂಜ ಹಾಗೂ ಸುಮ ಅವರ ಸುಪುತ್ರ.

LEAVE A REPLY

Please enter your comment!
Please enter your name here