ಪಾಲ್ತಾಡಿ: ಕುಂಜಾಡಿಯಲ್ಲಿ ಗ್ರಾಮ ವಿಕಾಸ ಸಮಿತಿ, ಬಿಜೆಪಿ ವತಿಯಿಂದ ಗೋಪೂಜೆ

0

ಸವಣೂರು: ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಮತ್ತು ಬಿಜೆಪಿ ಬೂತ್ ಸಮಿತಿ -70 ಇದರ ವತಿಯಿಂದ ದೀಪಾವಳಿ ಆಚರಣೆ, ಗೋಪೂಜೆ  ಕಾರ್ಯಕ್ರಮವು ಕೆಳಗಿನ ಕುಂಜಾಡಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ,ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಸುಪ್ರಭಾ ರೈ ಕುಂಜಾಡಿ, ಪ್ರಪುಲ್ಲ ಚಂದ್ರ ರೈ ಕುಂಜಾಡಿ, ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ , ಗ್ರಾಮ ವಿಕಾಸ ಸಮಿತಿ ಮಹಿಳಾ ಪ್ರಮುಖ್ ಇಂದಿರಾ ಬಿ.ಕೆ., ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ, ಭರತ್ ರೈ ಪಾಲ್ತಾಡಿ, ಹರಿಕಲಾ ರೈ ಕುಂಜಾಡಿ, ಬಿಜೆಪಿ ಬೂತ್ 70 ಅಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ,ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಇದರ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಕಾರ್ಯದರ್ಶಿ ಉದಯ ಬಿ.ಆರ್., ಪ್ರಶಾಂತ್ ರೈ ಕುಂಜಾಡಿ, ಆಶೀತ್ ರೈ ಕುಂಜಾಡಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here