ಪಾಣಾಜೆ: ಅಡಿಕೆ ಕಳ್ಳತನ

0

ಪುತ್ತೂರು:ಅಡಿಕೆ ಸಂಗ್ರಹಿಸಿಟ್ಟಿದ್ದ ಗೊಡೌನಿಗೆ ಹಾಕಿದ್ದ ಲಾಕ್ ಆಯುಧದಿಂದ ಮುರಿದು ಕಳ್ಳರು ಸುಮಾರು 90 ಸಾವಿರ ಮೌಲ್ಯದ 02 ಕ್ವಿಂಟಾಲ್ 90 ಕೆಜಿ ಅಡಿಕೆಯನ್ನು ಕದ್ದ ಪ್ರಕರಣವೊಂದು ಪಾಣಾಜೆಯಲ್ಲಿ ನಡೆದಿದೆ.

ಅಡಿಕೆಯನ್ನು ಸುಲಿದು ಗೋಣಿ ಚೀಲದಲ್ಲಿ ತುಂಬಿಸಿ ನ.22ರ ರಾತ್ರಿ ಪಾಣಾಜೆ ಗ್ರಾಮದ ನಿವಾಸಿ ಅಬ್ದುಲ್‌ ಬುರುಹಾನ್‌ ಗೊಡೌನ್‌ ಗೆ ಬಾಗಿಲು ಹಾಕಿದ್ದಾರೆ.ಮರುದಿನ ಬಂದು ನೋಡಲಾಗಿ ಯಾರೋ ಕಳ್ಳರು ಬಾಗಿಲು ಮುರಿದು ಕಳ್ಳತನ ನಡೆಸಿರುವುದು ಕಂಡು ಬಂದಿದೆ. ತಕ್ಷಣ ಅಬ್ದುಲ್‌ ಬುರುಹಾನ್‌ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದದಾರೆ. ಅದರಂತೆ ಅ.ಕ್ರ 113-2023 ಕಲಂ:454,457, 380 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪೊಲೀಸರು ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here