ಇರ್ದೆ ಬೆಟ್ಟಂಪಾಡಿ‌ ಪ್ರಾ.ಕೃ.ಪ.ಸಹಕಾರ ಸಂಘದಲ್ಲಿ ದೆಯ್ಯರಡ್ಕ ರಾಮ ಭಟ್ ರವರಿಗೆ ಶ್ರದ್ಧಾಂಜಲಿ ಸಭೆ

0

ಬೆಟ್ಟಂಪಾಡಿ: ನ. 23 ರಂದು ನಿಧನರಾದ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ದೆಯ್ಯರಡ್ಕ ರಾಮ ಭಟ್ ರವರಿಗೆ ಶ್ರದ್ಧಾಂಜಲಿ ಸಭೆಯು ನ. ಸಂಘದ ಸಭಾಂಗಣದಲ್ಲಿ ನ. 23 ರಂದು ನಡೆಯಿತು.ಸಂಘದ ಸ್ಥಾಪಕ ಸದಸ್ಯರಾಗಿ, 1969 ರಲ್ಲಿ ಸಂಘದ ಅಧ್ಯಕ್ಷರಾಗಿ, ಬಳಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿನ ಸೇವಾತತ್ಪರತೆಯನ್ನು ಗುಣಗಾನ ಮಾಡಲಾಯಿತು. ದೂಮಡ್ಕ ಹಾಗೂ ಪೇರಲ್ತಡ್ಕ ಶಾಲೆಗಳ ಅಭಿವೃದ್ಧಿ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ಜೀರ್ಣೋದ್ಧಾರದಲ್ಲಿ ಶ್ರಮ, ಇರ್ದೆ ಬೆಂದ್ರ್‌ತೀರ್ಥ ಹಾಗೂ ಕದಿಕೆಚಾವಡಿ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಅವರ ಸೇವೆ ಸಮಾಜದಲ್ಲಿ ಅವರಿಗೆ ಒಂದು ಉನ್ನತ ಗೌರವವನ್ನು ನೀಡಿದೆ. ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ದೇವರು ಚಿರಶಾಂತಿ‌ ನೀಡಲೆಂದು ನುಡಿನಮನ ಸಲ್ಲಿಸಲಾಯಿತು. 

ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು, ನಿರ್ದೇಶಕರಾದ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು, ಕರುಣಾಕರ ಶೆಟ್ಟಿ ಕೊಮ್ಮಂಡ, ಚಂದ್ರನ್ ತಲೆಪ್ಪಾಡಿ, ನಾಗರಾಜ್ ಕಜೆ, ಹರೀಶ್ ಗೌಡ ಗುಮ್ಮಟೆಗದ್ದೆ, ಶೇಷಪ್ಪ ರೈ ಮೂರ್ಕಾಜೆ, ದೀಪಿಕಾ ರೈ, ದೇವಪ್ಪ ನಾಯ್ಕ್, ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ನುಡಿನಮನ ಸಲ್ಲಿಸಿದರು.ವಲಯ ಮೇಲ್ವಿಚಾರಕ ವಸಂತ, ಸಿಬಂದಿಗಳಾದ ಲಿಂಗಪ್ಪ ಗೌಡ, ಆರ್.ಬಿ.‌ಸುವರ್ಣ, ಗಂಗಾ ಸಿ., ಸ್ವಾತಿ, ನವ್ಯಾ ಮತ್ತಿತರರು ಉಪಸ್ಥಿತರಿದ್ದರು.

 ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ಜೀರ್ಣೋದ್ಧಾರದಲ್ಲಿ ಶ್ರಮ, ಇರ್ದೆ ಬೆಂದ್ರ್‌ತೀರ್ಥ ಹಾಗೂ ಕದಿಕೆಚಾವಡಿ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಅವರ ಸೇವೆ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಶ್ರಮ ಸಮಾಜದಲ್ಲಿ ಅವರಿಗೆ ಒಂದು ಉನ್ನತ ಗೌರವವನ್ನು ತಂದುಕೊಟ್ಟಿತ್ತು. ಸಾಮಾಜಿಕವಾಗಿ ಅವರ ಸೇವೆ ಅಪಾರವಾದುದು. ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ.
– ಶಶಿಕುಮಾರ್ ರೈ ಬಾಲ್ಯೊಟ್ಟು ನಿರ್ದೇಶಕರು ಎಸ್‌ಸಿಡಿಸಿಸಿ ಬ್ಯಾಂಕ್ ಮಂಗಳೂರು

LEAVE A REPLY

Please enter your comment!
Please enter your name here