ನರಿಮೊಗರು ಪ್ರಸಾದಿನೀ ಆಯುರ್ನಿಕೇತನದಲ್ಲಿ ಧನ್ವಂತರಿ ಶಿಲಾ ಪ್ರತಿಮೆ ಪ್ರತಿಷ್ಠಾಪನೆ

0

ಪುತ್ತೂರು: ನರಿಮೊಗರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ 4 ಅಡಿ ಎತ್ತರದ ಧನ್ವಂತರಿ ಶಿಲಾ ಪ್ರತಿಮೆಯನ್ನು ನ.25ರಂದು ಪ್ರತಿಷ್ಠಾಪಿಸಲಾಯಿತು.
ಧನ್ವಂತರಿ ಜಯಂತಿಯ (ರಾಷ್ಟ್ರೀಯ ಆಯುರ್ವೇದ ದಿನ ) ಶುಭ ಸಂದರ್ಭದಲ್ಲಿ ಧನ್ವಂತರಿ ಹವನದೊಂದಿಗೆ ಆರಾಧಿಸಲಾಯಿತು. ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮತ್ತು ಶ್ರುತಿ ದಂಪತಿ ಪುತ್ರಿಯರಾದ ಸುಧೀಕ್ಷಾ ಹಾಗೂ ಸುನಿಧಿ ಇವರಿಂದ ಧನ್ವಂತರಿ ಸುಳಾದಿ ಗಾಯನ ನಡೆಯಿತು. ಅಯುರ್ವೇದ ಚಿಕಿತ್ಸೆಯಲ್ಲಿ ದೈವ ವ್ಯಪಾಶ್ರಯ ಚಿಕಿತ್ಸೆಯ ಮಹತ್ವವನ್ನು ಡಾ ರಾಘವೇಂದ್ರಪ್ರಸಾದ್ ಬಂಗಾರಡ್ಕ ವಿವರಿಸಿದರು. ಪ್ರಸಾದ ವಿತರಣೆಯೊಂದಿಗೆ ಸಮಾರಂಭ ಸಂಪನ್ನಗೊಂಡಿತ್ತು.

LEAVE A REPLY

Please enter your comment!
Please enter your name here