![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2023/11/e71cf54a-64f7-47ed-91b5-c0de668830b9.jpg)
ಆಲಂಕಾರು: ಆಲಂಕಾರು ವಲಯ ಬಂಟರ ಸಂಘದ ವತಿಯಿಂದ ವಲಯ ಬಂಟರ ಕ್ರೀಡಾಕೂಟ ಆಲಂಕಾರು ಶ್ರೀ ದುರ್ಗಾಂಬಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ ಉದ್ಘಾಟಿಸಿ ಶುಭಹಾರೈಸಿದರು.
![](https://puttur.suddinews.com/wp-content/uploads/2023/11/c690c37d-b390-4c01-8439-cf5957b81fc6.jpg)
![](https://puttur.suddinews.com/wp-content/uploads/2023/11/612d1f11-5e16-4a0c-88c0-b3679aaaedf6.jpg)
![](https://puttur.suddinews.com/wp-content/uploads/2023/11/da0aedd3-3982-4163-9842-fdec48b33073.jpg)
ಅಧ್ಯಕ್ಷತೆಯನ್ನು ವಲಯ ಬಂಟರ ಸಂಘದ ಅಧ್ಯಕ್ಷ ಸೇಸಪ್ಪ ರೈ .ಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ವಕೀಲ ದಿನೇಶ್ ಶೆಟ್ಟಿ ಬಾಲಾಜೆ, ಮಣಿಪಾಲ ಜೂನಿಯರ್ ಕಾಲೇಜ್ ನ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಕುಮಾರ್ ರೈ ಆರುವಾರ ಪಾಲ್ಗೊಂಡ್ಡಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೃಷಿಕ ತಾರನಾಥ ರೈ ನಗ್ರಿ ,ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕ ರಾಧಾಕೃಷ್ಣ ರೈ ಪರಾರಿಗುತ್ತು, ನೆಲ್ಯಾಡಿ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ, ಮಾಜಿ ಸೈನಿಕ ಚಿತ್ತರಂಜನ್ ಶೆಟ್ಟಿ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ಸ್ವಾಗತಿಸಿ, ಕೋಶಾಧಿಕಾರಿ ಲೋಕನಾಥ ರೈ ಕೇಳ್ಕ ಕಾರ್ಯಕ್ರಮ ನಿರೂಪಿಸಿದರು. ಜೂತೆ ಕಾರ್ಯದರ್ಶಿ ನೀರಾಜ್ ಕುಮಾರ್ ರೈ, ವಲಯ ಯುವ ಬಂಟರ ಸಂಘದ ಕಾರ್ಯದರ್ಶಿ ಕವನ್ ರೈ ಮನವಳಿಕೆ ಸಹಕರಿಸಿದರು. ಸಂಘಟನಾ ಕಾರ್ಯದರ್ಶಿ ಚೆನ್ನಕೇಶವ ರೈ ಗುತ್ತುಪಾಲು ಧನ್ಯವಾದ ಸಮರ್ಪಿಸಿದರು. ಕ್ರೀಡಾಕೂಟದಲ್ಲಿ ವಲಯದ ಆರು ಗ್ರಾಮದ ಬಂಟರು ಪಾಲ್ಗೊಂಡಿದ್ದರು. ಆಲಂಕಾರು ವಲಯದ ಎಲ್ಲಾ ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ದುರ್ಗಾಂಬಾದ ಕ್ರೀಡಾಂಗಣವನ್ನು ಸ್ವಚ್ಚಗೊಳಿಸಿದರು.