ಡಿ.21-24: ಪುತ್ತೂರಲ್ಲಿ ಸಿಪಿಐ(ಎಂ) ರಾಜ್ಯ ಮಟ್ಟದ ಸೈದ್ದಾಂತಿಕ ಅಧ್ಯಯನ ಶಿಬಿರ

0

ಪುತ್ತೂರು: ಸಿಪಿಐ(ಎಂ) ಪಕ್ಷದ ರಾಜ್ಯ ಮಟ್ಟದ ಸೈದ್ದಾಂತಿಕ ಅಧ್ಯಯನ ಶಿಬಿರವು ರಾಜ್ಯ ನಾಯಕರುಗಳಿಗೆ ಪುತ್ತೂರಲ್ಲಿ ಡಿ.21 ರಿಂದ 24ರ ವರೆಗೆ ನಡೆಯಲಿದೆ ಎಂದು ಸಿಪಿಐ(ಎಂ) ಪುತ್ತೂರು ತಾಲೂಕು ಕಾರ್ಯದರ್ಶಿ ಪಿ.ಕೆ.ಸತೀಶನ್ ತಿಳಿಸಿದರು.
ರಾಜ್ಯಮಟ್ಟದ ರೈತ, ಕಾರ್ಮಿಕ, ದಲಿತ, ಯುವಜನ ನಾಯಕರುಗಳಿಗೆ ನೀಡುವ ಈ ಸೈದ್ದಾಂತಿಕ ಅಧ್ಯಯನ ಶಿಬಿರ ನಡೆಸಲು ಸ್ವಾಗತ ಸಮಿತಿ ರಚನಾ ಸಭೆ ನಡೆಸಿ ಅವರು ಈ ಹೇಳಿಕೆಯನ್ನು ನೀಡಿರುತ್ತಾರೆ. ಸ್ವಾಗತ ಸಮಿತಿನ ಅಧ್ಯಕ್ಷರಾಗಿ ಪುತ್ತೂರು ಪಿಕೆ ಸತೀಶನ್, ಕಾರ್ಯದರ್ಶಿಯಾಗಿ ಬಿ.ಎಂ.ಭಟ್, ಖಜಾಂಜಿಯಾಗಿ ಈಶ್ವರಿ ಮುಂಡೂರು ಅವರು ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಜನಾರ್ಧನ ಗೌಡ, ಕೃಷ್ಣ, ದಾಮೋದರ ಮೊದಲಾದವರು ಇದ್ದಾರೆ. ವರ್ತಮಾನ ಪರಿಸ್ಥಿತಿಯಲ್ಲಿ ರೈತ, ಕಾರ್ಮಿಕರ ಬದುಕಿನ ಸುಭದ್ರತೆಗೆ ಅವರ ಸಂಘಟನೆಗೆ ನೀಡಬೇಕಾದ ಗಮನ, ಅವರ ಸಂಘಟನೆಗೆ ಕಮ್ಯೂನಿಸ್ಟರ ಪಾತ್ರ ಮೊದಲಾದ ಸೈದ್ದಾಂತಿಕ ವಿಚಾರಗಳ ತರಬೇತಿ ಶಿಬಿರ ಇದಾಗಿದೆ ಎಂದೂ ಅವರು ತಿಳಿಸಿದರು.

LEAVE A REPLY

Please enter your comment!
Please enter your name here