ಕೆಯ್ಯೂರು ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟದ ಕ್ರೀಡಾ ಕಛೇರಿ ಉದ್ಘಾಟನೆ 

0

ಕೆಯ್ಯೂರು:  ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಇದರ ವತಿಯಿಂದ ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟದ ಕ್ರೀಡಾ ಕಛೇರಿ ಉದ್ಘಾಟನೆಯು ದ.15ರಂದು ನಡೆಯಿತು. ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಇವರ ನಿವಾಸದಲ್ಲಿರುವ ಮಳಿಗೆಯಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಗೌರವ ಸಲಹೆಗಾರ  ಕೃಷ್ಣಪ್ರಸಾದ್ ರೈ ಕಣಿಯಾರು ರಿಬ್ಬರ್ ತುಂಡರಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ನ ಗೌರವ ಸಲಹೆಗಾರ ,ತಾರಾನಾಥ ರೈ ಕೊಡಂಬು, ಮಾಜಿ ಅಧ್ಯಕ್ಷ ಶರತ್ ಕುಮಾರ್ ರೈ,ದೇರ್ಲ, ಸತೀಶ್ ರೈ ದೇವಿನಗರ, ಅಧ್ಯಕ್ಷ  ಕೆ.ಯಸ್ ದಿನೇಶ್, ಉಪಾಧ್ಯಕ್ಷ ಹರೀಶ್ ಶೆಟ್ಟಿ ಕೆಯ್ಯೂರು ,ಕಾರ್ಯದರ್ಶಿ ಪ್ರವೀಣ್ ಕಟ್ಟತ್ತಾರು,ಕೋಶಾಧಿಕಾರಿ ಯಸ್ ಚಂದ್ರಶೇಖರ ರೈ ಸಣoಗಳ,ಕ್ರೀಡಾಕಾರ್ಯದರ್ಶಿ ಶಕೂರ್ ಮೇರ್ಲ,ಜೊತೆ ಕಾರ್ಯದರ್ಶಿ ಸಂಪತ್ ಕೆಯ್ಯೂರು, ಮತ್ತು  ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here