ಪಡ್ನೂರು ಶ್ರೀ ರಾಮ್‌ ಫ್ರೆಂಡ್ಸ್‌ ನಿಂದ ಹಿಂದಾರು ಜಯಗುರು ಆಚಾರ್ಯರಿಗೆ ಸನ್ಮಾನ

0

ಪುತ್ತೂರು : ಪಡ್ನೂರು ಶ್ರೀ ರಾಮ್ ಫ್ರೆಂಡ್ಸ್ ಇದರ 11 ನೆಯ ವಾರ್ಷಿಕೋತ್ಸವವು ಪಡ್ನೂರು ಶಾಲಾ ಅವರಣದಲ್ಲಿ ಇತ್ತೀಚೆಗೆ ನಡೆಯಿತು. ಪುತ್ತೂರು ರೋಟರಿ ಬ್ಲಡ್ ಸೆಂಟರ್ ಹಾಗೂ ಕಾಮತ್ ಒಪ್ಟಿಕಲ್ಸ್ ಸಂಸ್ಥೆಯ ಸಹಕಾರದೊಂದಿಗೆ ಉಚಿತ ರಕ್ತದಾನ ಶಿಬಿರ,ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆದು , ಹಲವು ಮಂದಿ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಹೈನುಗಾರಿಕೆ ಪ್ರಶಸ್ತಿ ಪುರಸ್ಕೃತ , ಬಿ.ಇಪದವೀಧರ ಜಯಗುರು ಆಚಾರ್ ಹಿಂದಾರು ಅವರನ್ನು ಶ್ರೀ ರಾಮ್ ಫ್ರೆಂಡ್ಸ್ ಇದರ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಶ್ರೀ ರಾಮ್ ಫ್ರೆಂಡ್ಸ್ ಇದರ ಅಧ್ಯಕ್ಷ ಶಿಶಿರ್ ಪೆರ್ವೋಡಿ , ಸಂಚಾಲಕ ವಿಶ್ವನಾಥ ಪಂಜಿಗುಡ್ಡೆ ,ಪ್ರಧಾನ ಕಾರ್ಯದರ್ಶಿ ಕೀರ್ತಿಕ್ ಕುಂಜಾರು , ಕೇರಳ ಕಬಡ್ಡಿ ತಂಡದ ಕಪ್ತಾನ ಗಣೇಶ್ ಕುಂಬ್ಳೆ ,ಬನ್ನೂರು ಪಂಚಾಯತ್ ಸದಸ್ಯ ಗಿರಿಧರ್ ಪಂಜಿಗುಡ್ಡೆ ಹಾಗೂ ಗಣೇಶ್ ಪಳ್ಳ ಹಾಜರಿದ್ದರು.

LEAVE A REPLY

Please enter your comment!
Please enter your name here