ವಾದ್ಯ ವಾದನೊಲೆ ಪಂಥೊ: ಕೊಳಲು, ಸ್ಯಾಕ್ಸೋಫೋನ್‌ನಲ್ಲಿ ಹರೀಶ್ ಅರಿಯಡ್ಕ ಪ್ರಥಮ

0

ಪುತ್ತೂರು: ತುಳು ಕೂಟ ಕುಡ್ಲ ಇದರ ಬಂಗಾರ್ ಪರ್ಬೊ ಸರಣಿ ವೈಭವೊ-10 ಕಾರ್ಯಕ್ರಮದಂಗವಾಗಿ ಕಾಟಿಪಳ್ಳದಲ್ಲಿ ನಡೆದ ತುಳುನಾಡ್ದ ಪಾರಂಪರಿಕ ವಾದ್ಯ ವಾದನೊಲೆ ಪಂಥೊ ಎಂಬ ಸ್ಪರ್ಧೆಯಲ್ಲಿ ಅರಿಯಡ್ಕ ಗ್ರಾಮದ ಹರೀಶ್ ಸ್ವಾಮಿನಗರ ಇವರು ಕೊಳಲು ಮತ್ತು ಸ್ಯಾಕ್ಸೋಫೋನ್ ವಾದನದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಇವರು ಪುತ್ತೂರು ಸರಕಾರಿ ಜ್ಯೂನಿಯರ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು ಕೊಳಲು ವಾದಕ ರಾಜರತ್ನಂ ದೇವಾಡಿಗರವರಲ್ಲಿ ಕೊಳಲು ಮತ್ತು ಸ್ಯಾಕ್ಸೋಫೋನ್ ಅಭ್ಯಾಸ ಮಾಡುತ್ತಿದ್ದಾರೆ. ಹರೀಶ್‌ರವರು ಅರಿಯಡ್ಕದ ದೈವ ನರ್ತಕ ರವಿ ಅಜಿಲ ಮತ್ತು ಹೊನ್ನಮ್ಮರವರ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here