ಜ.19, 20: ಕರುವೇಲು ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ದೇವರಿಗೆ ನವಕ ಕಲಶಾಭಿಷೇಕ, ದುರ್ಗಾಪೂಜೆ, 28ನೇ ವರ್ಷದ ಸತ್ಯನಾರಾಯಣ ಪೂಜೆ, ಕುಣಿತ ಭಜನಾ ಸಂಭ್ರಮ

0

ಪುತ್ತೂರು: ಶ್ರೀರಾಮ ಭಜನಾ ಮಂದಿರ ಕರುವೇಲು ಬಿಳಿಯೂರು ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರುವೇಲು ಒಕ್ಕೂಟದ ಸಹಯೋಗದೊಂದಿಗೆ ಶ್ರೀರಾಮ ದೇವರಿಗೆ ನವಕಲಶಾಭಿಷೇಕ, ಶ್ರೀ ದುರ್ಗಾಪೂಜೆ, 28ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕುಣಿತ ಭಜನಾ ಸಂಭ್ರಮ ಜನವರಿ 19 ಮತ್ತು 20ರಂದು ಕರುವೇಲು ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಲಿದೆ.

ಜ.20ರಂದು ಸಂಜೆ 4ರಿಂದ ಕರುವೇಲು ಶ್ರೀರಾಮ ಭಜನಾ ಮಂದಿರದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ತಂಡಗಳಿಂದ ಕುಣಿತ ಭಜನಾ ಸಂಭ್ರಮ ನಡೆಯಲಿದ್ದು ಭಾಗವಹಿಸಲು ಆಸಕ್ತಿ ಇರುವ ಭಜನಾ ತಂಡಗಳು ಜ. 6ರೊಳಗೆ ಸಂಘಟಕರನ್ನು 9538468158 ಅಥವಾ 9980189641 ನಂಬ್ರಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here