ಬಾಗಲಕೋಟೆ ಡಿಸಿ ಕಚೇರಿಯ ಪುರಂದರ ಪುತ್ತೂರು ತಹಸಿಲ್ದಾರ್ ಆಗಿ ವರ್ಗಾವಣೆ-ಶಿವಶಂಕರ್‌ಗೆ ನಿಯುಕ್ತಿಯಾಗದ ಸ್ಥಳ

0

ಪುತ್ತೂರು:ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ತಹಸಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪುರಂದರ ಅವರನ್ನು ಪುತ್ತೂರು ತಹಸಿಲ್ದಾರ್ ಆಗಿ ವರ್ಗಾವಣೆಗೊಳಿಸಲಾಗಿದೆ.ಪುತ್ತೂರು ತಾಲೂಕು ಗ್ರೇಡ್-1 ತಹಸಿಲ್ದಾರ್ ಹುದ್ದೆಯಲ್ಲಿ ಕಳೆದ ಕೆಲವು ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದ ಗ್ರೇಡ್-2 ತಹಸಿಲ್ದಾರ್ ಜಿ.ಶಿವಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.ಅವರು ಮುಂದಿನ ಸ್ಥಳ ನಿಯುಕ್ತಿಗಾಗಿ ಸರಕಾರದಲ್ಲಿ ವರದಿ ಮಾಡಿಕೊಳ್ಳುವಂತೆ ಸರಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ(ಸೇವೆಗಳು-3)ಮುಕ್ತಾರ್ ಪಾಷ ಹೆಚ್.ಜಿ.ಅವರು ಜ.24ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ.ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಈ ವರ್ಗಾವಣೆ ಆದೇಶವಾಗಿದೆ

LEAVE A REPLY

Please enter your comment!
Please enter your name here